ರೇಣುಕಾಸ್ವಾಮಿಗೆ ದರ್ಶನ್ ದುಡ್ಡು ಕೊಟ್ಟು ಕಳಿಸಿದ್ರಾ? ವಿನೋದ್ ರಾಜ್ ಚೆಕ್ ಕೊಟ್ಟಿದ್ದಕ್ಕೂ ಕೇಳಿಬಂತು ಅಪಸ್ವರ

Krishnaveni K

ಶನಿವಾರ, 27 ಜುಲೈ 2024 (09:09 IST)
ಬೆಂಗಳೂರು: ದರ್ಶನ್ ಆಂಡ್ ಗ್ಯಾಂಗ್ ನಿಂದ ಹತ್ಯೆಗೀಡಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿದ್ದ ನಟ ವಿನೋದ್ ರಾಜ್ 1 ಲಕ್ಷ ರೂ.ಗಳ ಚೆಕ್ ಕೊಟ್ಟು ಬಂದಿದ್ದರು. ಆದರೆ ಇದಕ್ಕೆ ಇದೀಗ ಅದಕ್ಕೂ ಅಪಸ್ವರ ಕೇಳಿಬಂದಿದೆ.

ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ವಿನೋದ್ ರಾಜ್ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಮತ್ತೆ ಕೆಲವರು ಈ ದುಡ್ಡು ನೀವೇ ನಿಮ್ಮ ಕೈಯಿಂದಾನೇ ಕೊಟ್ರಾ ಇಲ್ಲಾ ದರ್ಶನ್ ನಿಮ್ಮ ಮೂಲಕ ಕೊಡಿಸಿದ್ರಾ ಎಂದು ಅಪಸ್ವರವೆತ್ತಿದ್ದಾರೆ. ರೇಣುಕಾಸ್ವಾಮಿ ಪತ್ನಿ ಹೆಸರಿನಲ್ಲಿ ಅವರ ಮನೆಯಲ್ಲಿಯೇ ವಿನೋದ್ ರಾಜ್ 1 ಲಕ್ಷ ರೂ.ಗಳ ಚೆಕ್ ಬರೆದು ಕೊಟ್ಟಿದ್ದರು.

ಈ ಚೆಕ್ ಕೊಟ್ಟಿದ್ದು ಅವರದ್ದೇ ಖಾತೆಯಿಂದ. ಆದರೂ ಆ ದುಡ್ಡು ದರ್ಶನ್ ಕೊಡಲು ಹೇಳಿರಬಹುದು ಎನ್ನುವುದು ಕೆಲವರ ಗುಮಾನಿ. ಯಾಕೆಂದರೆ ಮೊನ್ನೆಯಷ್ಟೇ ವಿನೋದ್ ರಾಜ್ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ ಭೇಟಿ ಮಾಡಿ ಬಂದಿದ್ದರು. ಇದರ ಬೆನ್ನಲ್ಲೇ ವಿನೋದ್ ರಾಜ್ ಚಿತ್ರದುರ್ಗಕ್ಕೆ ತೆರಳಿ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿರುವುದಕ್ಕೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಒಂದೊಳ್ಳೆಯ ಉದ್ದೇಶದಿಂದಲೇ ವಿನೋದ್ ರಾಜ್ ಚಿತ್ರದುರ್ಗದವರೆಗೂ ತೆರಳಿ ಹಣ ಸಹಾಯ ಮಾಡಿ ಬಂದಿದ್ದಾರೆ. ಆದರೆ ಅದರಲ್ಲೂ ಕೆಲವರು ಈ ರೀತಿ ಅಪಸ್ವರವೆತ್ತುತ್ತಿರುವುದು ಮತ್ತಷ್ಟು ಜನ ಅನುಮಾನ ಪಡುವಂತೆ ಮಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ