ಚಾರ್ಜ್ ಶೀಟ್ ಮಾಧ್ಯಮಗಳಿಗೆ ನೀಡಬಾರದು ಎಂದು ಕೋರ್ಟ್ ಗೆ ಮನವಿ ಮಾಡಿದ್ದೇಕೆ ದರ್ಶನ್

Krishnaveni K

ಸೋಮವಾರ, 9 ಸೆಪ್ಟಂಬರ್ 2024 (11:48 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಚಾರ್ಜ್ ಶೀಟ್ ವಿವರಗಳು ಆತಂಕ ತಂದಿದೆ.

ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬಳಿಕ ದರ್ಶನ್ ಆಂಡ್ ಗ್ಯಾಂಗ್ ನ ಕ್ರೌರ್ಯ ಯಾವ ಮಟ್ಟಿಗಿತ್ತು ಎನ್ನುವ ಸ್ಪಷ್ಟ ಚಿತ್ರಣ ಜನರಿಗೆ ಸಿಕ್ಕಿದೆ. ರೇಣುಕಾಸ್ವಾಮಿ ಕೊನೆಯ ಫೋಟೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಜೊತೆಗೆ ರೇಣುಕಾಸ್ವಾಮಿ ಜೊತೆಗೆ ಪವಿತ್ರಾ ಗೌಡ ಹೆಸರಿನಲ್ಲಿ ಪವನ್ ನಡೆಸಿದ ಚ್ಯಾಟಿಂಗ್ ಹಿಸ್ಟರಿ ಕೂಡಾ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಇದರ ಬೆನ್ನಲ್ಲೇ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಚಾರ್ಜ್ ಶೀಟ್ ವಿವರಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ. ಅಷ್ಟಕ್ಕೂ ದರ್ಶನ್ ಈ ರೀತಿ ಚಾರ್ಜ್ ಶೀಟ್ ವಿವರ ಬಹಿರಂಗಪಡಿಸದಂತೆ ಮನವಿ ಮಾಡಿದ್ದಕ್ಕೂ ಕಾರಣವಿದೆ.

ದರ್ಶನ್ ಸಿನಿಮಾ ನಟ. ಮುಂದೊಂದು ದಿನ ಹೊರಗೆ ಬಂದಾಗ ಮತ್ತೆ ಅವರು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಬೇಕು. ಚಾರ್ಜ್ ಶೀಟ್ ನಲ್ಲಿರುವ ವಿವರಗಳು ಅವರ ಇಮೇಜ್ ಹಾಳು ಮಾಡಬಹುದು. ಇದರಿಂದ ಅವರ ವೃತ್ತಿ ಜೀವನಕ್ಕೆ ಮತ್ತಷ್ಟು ತೊಂದರೆಯಾಗಬಹುದು. ಹೀಗಾಗಿ ಅವರೀಗ ವಿವರ ಬಹಿರಂಗಪಡಿಸದೇ ಇರಲು ಕೋರ್ಟ್ ಗೆ ಮೊರೆ ಹೋಗಿರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ