ನಿಮ್ಮ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದಾರಲ್ಲಾ ಎಂದಿದ್ದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು ಗೊತ್ತಾ?!

ಮಂಗಳವಾರ, 16 ಏಪ್ರಿಲ್ 2019 (07:09 IST)
ಮಂಡ್ಯ:  ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸೇರಿದ ಮೈಸೂರಿನ ಫಾರ್ಮ್ ಹೌಸ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.

 
ಫಾರ್ಮ್ ಹೌಸ್ ಗೆ ಚುನಾವಣಾಧಿಕಾರಿಗಳ ತಂಡ ಬಂದು ತಪಾಸಣೆ ಮಾಡಿದ ಬಗ್ಗೆ ನಟ ದರ್ಶನ್ ಗೆ ಮಾಧ್ಯಮಗಳು ಪ್ರಶ್ನಿಸಿದಾಗ ತಮಾಷೆಯಿಂದಲೇ ಉತ್ತರಿಸಿದ ಅವರು ‘ನನ್ನ ಫಾರಂಗೆ ಬಂದು ದಾಳಿ ಮಾಡಿದ್ರೆ ಏನು ಸಿಗುತ್ತೆ? ಸ್ವಲ್ಪ ಹಿಂಡಿ, ಬೂಸಾ, ಪಶು ಆಹಾರ ಅಂತಹದ್ದೇನಾದರೂ ಸಿಗಬಹುದು.  ಹಕ್ಕಿ, ಪಕ್ಷಿಗಳು ಸಿಗಬಹುದೇನೋ. ಅದು ಬಿಟ್ಟರೆ ಬೇರೇನೂ ಇರಲ್ಲ’ ಎಂದು ದರ್ಶನ್ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ