ಬಾಹುಬಲಿ ಚಿತ್ರಕ್ಕಾದ ಗತಿಯೇ ಧ್ರವ ಸರ್ಜಾ ಭರ್ಜರಿಗೂ ಆಯಿತು!

ಶನಿವಾರ, 16 ಸೆಪ್ಟಂಬರ್ 2017 (09:51 IST)
ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರ ನಿನ್ನೆ ರಾಜ್ಯಾದ್ಯಂತ ತೆರೆ ಕಂಡಿದೆ.  ಮೊದಲೇ ದಿನವೇ ಸಾಕಷ್ಟು ಅಬ್ಬರ ಮೂಡಿಸಿದ ಚಿತ್ರಕ್ಕೆ ಮೊದಲ ದಿನವೇ ವಿಘ್ನವೊಂದು ಎದುರಾಗಿದೆ.

 
ಇತ್ತೀಚೆಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ತುಂಬಾ ಫಾಸ್ಟ್. ಅದರಿಂದಾಗಿ ಎಷ್ಟೋ ಚಿತ್ರಗಳು ಪ್ರಚಾರ ಗಿಟ್ಟಿಸಿಕೊಳ್ಳುವುದರ ಜತೆಗೆ ಸಮಸ್ಯೆಯನ್ನೂ ಎದುರಿಸುತ್ತವೆ. ಅದೇ ರೀತಿ ಭರ್ಜರಿ ಚಿತ್ರತಂಡವೂ ಸಂಕಟ ಎದುರಿಸಿದೆ.

ಚಿತ್ರ ಥಿಯೇಟರ್ ನಲ್ಲಿ ಪ್ರದರ್ಶನವಾಗುತ್ತಿದ್ದಂತೆ, ಇತ್ತ ವ್ಯಕ್ತಿಯೊಬ್ಬ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಆಗಿ ಚಿತ್ರದ ಮೊದಲಾರ್ಧ ಜಗತ್ತಿಗೇ ತೋರಿಸಿದ್ದಾನೆ. ಇದರ ಲಾಭ ಪಡೆದ ಹಲವಾರು ಮಂದಿ ಪುಕ್ಸಟೆಯಾಗಿ ಸಿನಿಮಾ ನೋಡಿದ್ದಾರೆ.

ಆದರೆ ಈತನ ಈ ಲೈವ್ ಶೋಗೆ ಆಕ್ರೋಶಭರಿತ ಕಾಮೆಂಟ್ ಗಳು ಬರತೊಡಗಿದ ಮೇಲೆ ಲೈವ್ ಪ್ರಸಾರ ನಿಲ್ಲಿಸಿದ್ದಾನೆ. ಇತ್ತೀಚೆಗಿನ ದಿನಗಳಲ್ಲಿ ಇದು ವ್ಯಾಪಕವಾಗಿದ್ದು, ಬಹುನಿರೀಕ್ಷಿತ ಬಾಹುಬಲಿ 2 ಕೂಡಾ ಇದೇ ಸಮಸ್ಯೆ ಎದುರಿಸುತ್ತು. ಇದರಿಂದ ನಷ್ಟವಾಗುವುದು ಕಷ್ಟಪಟ್ಟು ಸಿನಿಮಾ ಮಾಡಿದ ನಿರ್ಮಾಪಕನಿಗೆ.

ಇದನ್ನೂ ಓದಿ.. ಕೊಹ್ಲಿಯನ್ನು ಸ್ವೀಪರ್ ಎಂದವನ ವಿರುದ್ಧ ಹರ್ಭಜನ್ ಕಿಡಿ ಕಿಡಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ