ಪ್ರಕಾಶ್ ರೈಯ ಈ ಮಾತುಗಳನ್ನು ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದೇಕೆ?

ಮಂಗಳವಾರ, 12 ಸೆಪ್ಟಂಬರ್ 2017 (10:15 IST)
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ನೀಡಿದ ಹೇಳಿಕೆ ಕೆಲವು ವರ್ಗದವರ ಟೀಕೆಗೆ ಗುರಿಯಾಗಿತ್ತು. ಈಗ ಕಿಚ್ಚ ಸುದೀಪ್ ಪ್ರಕಾಶ್ ರೈಯ ಅಂಕಣವೊಂದನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

 
ಪ್ರಕಾಶ್ ರೈ ಬಲಪಂಥೀಯರ ಬಗ್ಗೆ ಮಾತನಾಡಿದ್ದು, ಆ ವರ್ಗದವರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರೈ ನಿಮಗೆ ಇಂತಹದ್ದೊಂದು ಹೇಳಿಕೆ ನೀಡುವ ಅಗತ್ಯವೇನಿತ್ತು ಎಂದು ಅಭಿಪ್ರಾಯಗಳು ಬಂದಿದ್ದವು.

ಈ ಬಗ್ಗೆ ಪ್ರಕಾಶ್ ರೈ ಪತ್ರಿಕೆಯೊಂದಕ್ಕೆ ಅಂಕಣ ಬರೆದಿದ್ದರು. ಇದರಲ್ಲಿ ನಮಗ್ಯಾಕೆ ಬೇಕು ಎಂದು ಸುಮ್ಮನಿರುವುದೂ ಕೊಲೆ ಮಾಡಿದಷ್ಟು ಘೋರ ಅಪರಾಧವೇ ಎಂದು ಬರೆದುಕೊಂಡಿದ್ದಾರೆ. ಇದನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಉಲ್ಲೇಖಿಸಿರುವ ಕಿಚ್ಚ ಸುದೀಪ್, ಪ್ರಕಾಶ್ ಸರ್ ನೀವು ಸರಳ ಶಬ್ಧಗಳಲ್ಲಿ ಹೇಳಿರುವ ಮಾತುಗಳು ನಿಮ್ಮ ವಿಧೇಯತೆ ಸೂಚಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ.. ಪ್ರಧಾನಿಯಾಗಲು ನಾನು ರೆಡಿ ಎಂದ ರಾಹುಲ್ ಗಾಂಧಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ