ಡ್ರಗ್ ಕೇಸ್ ನಲ್ಲಿ ಹೆಸರು ಬರುತ್ತಿದ್ದಂತೇ ಚುರುಕಾದ ಅನುಶ್ರೀ

ಗುರುವಾರ, 9 ಸೆಪ್ಟಂಬರ್ 2021 (09:30 IST)
ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೇ ಆಂಕರ್ ಅನುಶ್ರೀ ಜಾಗೃತರಾಗಿದ್ದು, ತಮ್ಮ ವಕೀಲರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.



ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ ಅನುಶ್ರೀ ಹೆಸರನ್ನು ಸಿಸಿಬಿ ಕೈಬಿಟ್ಟಿತ್ತು. ಇದಾದ ಬೆನ್ನಲ್ಲೇ ವಿವಾದವುಂಟಾಗಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಅವರ ಹೆಸರನ್ನು ಕೈ ಬಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದರ ಬೆನ್ನಲ್ಲೇ ಅನುಶ್ರೀ ತಮ್ಮ ವಕೀಲರ ಜೊತೆ ಚರ್ಚೆ ನಡೆಸಿದ್ದು, ಕೇಸ್ ರಿ ಓಪನ್ ಆದರೆ ಏನು ಮಾಡಬೇಕು ಎಂದು ಕಾನೂನಿಗೆ ಸಂಬಂಧಪಟ್ಟ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅವರು ಸೋಷಿಯಲ್ ಮೀಡಿಯಾ, ಮಾಧ‍್ಯಮಗಳಿಂದ ದೂರವುಳಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ