ಜನಾರ್ಧನ ರೆಡ್ಡಿ ಜತೆ ಕಿಚ್ಚ ಸುದೀಪ್ ಫೋಟೊಗೆ ಅಭಿಮಾನಿಗಳಿಂದ ಬೇಸರದ ಕಾಮೆಂಟ್!

ಸೋಮವಾರ, 23 ಜುಲೈ 2018 (15:25 IST)
ಬೆಂಗಳೂರು: ಕಿಚ್ಚ ಸುದೀಪ್  ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಉದ್ಘಾಟನಾ ಸಮಾರಂಭವು ನಡೆದಿತ್ತು. ಈ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್​, ಅಂಬರೀಶ್​, ಜನಾರ್ಧನ ರೆಡ್ಡಿ ಮತ್ತಿತರು ಹಾಜರಿದ್ದರು.
ಸುದೀಪ್ ಅವರು ಜನಾರ್ಧನ ರೆಡ್ಡಿ ಜತೆ  ಫೋಸ್ ನೀಡಿರುವ ಫೋಟೊಗೆ ಫೇಸ್ ಬುಕ್ ಪೇಜ್ ನಲ್ಲಿ ಸಾಕಷ್ಟು ಟೀಕೆಗಳು ಬಂದಿವೆ.



‘ನಿಮಗೆ ಕ್ಲೀಯರ್ ಇಮೇಜ್ ಇದೆ ಹಾಳು ಮಾಡಿಕೊಳ್ಳಬೇಡಿ’, ‘ಬಿಗ್ ಬಕೆಟ್’ , ರಾಮುಲು ಅಣ್ಣ ಇದ್ದರೆ ಓಕೆ ಇವರು ಯಾಕೆ ಎಂಬಿತ್ಯಾದಿ ಕಾಮೆಂಟ್ ಗಳನ್ನು ಅಭಿಮಾನಿಗಳು ಹಾಕಿದ್ದಾರೆ.  


ಶಾಸಕ ಬಿ.  ಶ್ರೀರಾಮುಲು ಕೂಡ 'ಸಮರ್ಥನೆಗಾಗಿ ಸಂಪರ್ಕ' ಪ್ರಚಾರಾಂದೋಲನದ ಭಾಗವಾಗಿ ಸ್ಯಾಂಡಲ್​​ವುಡ್​ ನಟ ಸುದೀಪ್​ ಅವರನ್ನು ಇಂದು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮೋದಿ ಸರ್ಕಾರ ಜನತೆಗೆ ನೀಡಿದ್ದ ಆಶ್ವಾಸನೆಗಳನ್ನ ಈಡೇರಿಸಿರುವ ಬಗ್ಗೆ ಮಾಹಿತಿ ಇರುವ ಪುಸ್ತಕವನ್ನು ಸುದೀಪ್​ ಅವರಿಗೆ ನೀಡಲಾಯಿತು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ