ರಾಮಭಕ್ತರ ಕೆಂಗಣ್ಣಿಗೆ ಗುರಿಯಾದ ‘ಗಟ್ಟಿಮೇಳ’ ನಟ ಪವನ್

ಭಾನುವಾರ, 25 ಏಪ್ರಿಲ್ 2021 (10:19 IST)
ಬೆಂಗಳೂರು: ಕೊರೋನಾ ಸೋಂಕಿಗೆ ತನ್ನ ಬಾವ, ಅವರ ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ವಿಡಿಯೋ ಮೂಲಕ ವ್ಯವಸ್ಥೆ ಬಗ್ಗೆ ಸಿಡಿದೆದ್ದಿದ್ದ ಗಟ್ಟಿಮೇಳ ಧಾರವಾಹಿ ನಟ ಪವನ್ ಈಗ ರಾಮಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸುವಾಗ ಪವನ್ ಸರ್ಕಾರಕ್ಕೆ ರಾಮಮಂದಿರ, ಹೊಸ ಪಾರ್ಲಿಮೆಂಟ್, ಎತ್ತರದ ಪ್ರತಿಮೆಗಳು ಇವುಗಳನ್ನು ನಮ್ಮಂಥವರ ಹೆಣಗಳ ಮೇಲೆ ಕಟ್ಟಲಾಗುತ್ತದೆ ಎಂದಿದ್ದರು. ಇದು ರಾಮಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಇವರ ನೋವು ನಮಗೂ ಅರಿವಾಗುತ್ತದೆ. ಆದರೆ ಆಕ್ರೋಶ  ವ್ಯಕ್ತಪಡಿಸುವಾಗ ರಾಮಮಂದಿರದ ಹೆಸರು ಪ್ರಸ್ತಾಪಿಸಿರುವುದು ಏಕೆ? ಅಷ್ಟಕ್ಕೂ ರಾಮಮಂದಿರವನ್ನು ರಾಮಭಕ್ತರು ನೀಡಿದ ದೇಣಿಗೆಯಲ್ಲಿ ಕಟ್ಟಲಾಗುತ್ತಿದೆಯೇ ಹೊರತು, ಸರ್ಕಾರದ ದುಡ್ಡು ಬಳಸಿಕೊಳ್ಳುತ್ತಿಲ್ಲ. ಅನಗತ್ಯವಾಗಿ ಇಲ್ಲಿ ರಾಮಮಂದಿರದ ಹೆಸರು ಎಳೆದು ತರುತ್ತಿರುವುದು ಯಾಕೆ ಎಂದು ಪವನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ