ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇ: ಪುನೀತ್ ಮಾಡಿದ ತ್ಯಾಗದಿಂದ ಸ್ಟಾರ್ ಆದ್ರು ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ಅವಕಾಶ ಗಿಟ್ಟಿಸಿಕೊಂಡವರು. ಬಳಿಕ ಚೆಲ್ಲಾಟ ಸಿನಿಮಾ ಅವರ ವೃತ್ತಿ ಜೀವನಕ್ಕೆ ಒಂದು ತಿರುವು ನೀಡಿತು. ಈ ಸಿನಿಮಾ ಕ್ಲಿಕ್ ಆಗುವುದರ ಮೂಲಕ ಗಣೇಶ್ ಒಂದಷ್ಟು ಹೆಸರು ಮಾಡಿದರು.
ಆದರೆ ಅವರ ಅದೃಷ್ಟ ಖುಲಾಯಿಸಿದ್ದು ಸ್ಟಾರ್ ಪಟ್ಟ ನೀಡಿದ್ದು ಮುಂಗಾರು ಮಳೆ ಸಿನಿಮಾ. ಈ ಸಿನಿಮಾದ ಸ್ಕ್ರಿಪ್ಟ್ ಮೊದಲು ಯೋಗರಾಜ್ ಭಟ್ ತೋರಿಸಿದ್ದು ಪುನೀತ್ ರಾಜ್ ಕುಮಾರ್ ಅವರಿಗೆ. ಆದರೆ ಸಿನಿಮಾದ ಸ್ಕ್ರಿಪ್ಟ್ ಓದಿ ಇದನ್ನು ಯಾರಾದರೂ ಹೊಸಬರು ಮಾಡಿದರೆ ಚೆನ್ನಾಗಿರುತ್ತದೆ ಎಂದು ಪುನೀತ್ ಸೂಚಿಸಿದ್ದರಂತೆ.
ಅದೇ ಕಾರಣಕ್ಕೆ ಯೋಗರಾಜ್ ಭಟ್, ಗಣೇಶ್ ಅವರನ್ನು ಸಿನಿಮಾಗೆ ಹಾಕಿಕೊಂಡರು. ಈ ಇಲ್ಲದೇ ಹೋಗಿದ್ದರೆ ಬಹುಶಃ ಗಣೇಶ್ ಗೆ ಇಷ್ಟೊಂದು ನೇಮು-ಫೇಮು ಬರುತ್ತಿರಲಿಲ್ಲವೇನೋ. ಬಹುಶಃ ಅಂದು ಪುನೀತ್ ಈ ಸಿನಿಮಾವನ್ನು ಅವರೇ ಮಾಡಲು ಒಪ್ಪಿಕೊಂಡಿದ್ದರೆ ಗಣೇಶ್ ಗೆ ಅವಕಾಶವೂ ಸಿಗುತ್ತಿರಲಿಲ್ಲ. ಹೀಗಾಗಿ ಪುನೀತ್ ಮಾಡಿದ ತ್ಯಾಗದಿಂದ ಗಣೇಶ್ ಕ್ಲಿಕ್ ಆದರು.