ಲವ್ ಯೂ ರಚ್ಚು ಪತ್ರಿಕಾಗೋಷ್ಠಿಯಲ್ಲಿ ಅಜೇಯ್ ರಾವ್ ಮುನಿಸಿನದ್ದೇ ಮಾತುಕತೆ

ಶನಿವಾರ, 25 ಡಿಸೆಂಬರ್ 2021 (22:31 IST)
ಬೆಂಗಳೂರು: ಡಿಸೆಂಬರ್ 31 ರಂದು ಬಿಡುಗಡೆಯಾಗಲಿರುವ ಲವ್ ಯೂ ರಚ್ಚು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ನಾಯಕ ಅಜೇಯ್ ರಾವ್ ಮತ್ತು ನಿರ್ಮಾಪಕ ಗುರುದೇಶ್ ಪಾಂಡೆ ನಡುವಿನ ವಿವಾದವೇ ಹೆಚ್ಚು ಸದ್ದು ಮಾಡಿತು.

ಪತ್ರಿಕಾಗೋಷ್ಠಿಯಲ್ಲಿ ನಾಯಕಿ ರಚಿತಾ ರಾಂ ಕೂಡಾ ಉಪಸ್ಥಿತರಿದ್ದರು. ಅವರಿಗೂ ಅಜೇಯ್ ರಾವ್ ಮತ್ತು ನಿರ್ಮಾಪಕರ ನಡುವಿನ ಮುನಿಸಿನ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಉತ್ತರಿಸಿದ ರಚಿತಾ ಅಜೇಯ್ ಅವರಿಗೆ ಪ್ರಚಾರಕ್ಕೆ ಬರಲು ಇಷ್ಟವಿಲ್ಲ ಎಂದರೆ ಬಿಟ್ಟು ಬಿಡೋಣ. ಆ ಬಗ್ಗೆ ಮಾತು ಬೇಡ ಎಂದರು. ಆದರೆ ಅಜೇಯ್ ಜೊತೆ ಕೆಲಸ ಮಾಡಿದ್ದು ಖುಷಿಕೊಟ್ಟಿತು. ಈ ಮೊದಲೂ ನನಗೆ ಅವರ ಜೊತೆ ನಟಿಸಲು ಆಫರ್ ಬಂದಿತ್ತು ಎಂದರು.

ಇನ್ನು, ನಿರ್ಮಾಪಕ ಗುರುದೇಶ್ ಪಾಂಡೆ, ಮತ್ತೆ ಅಜೇಯ್ ರಾವ್ ಬಗ್ಗೆ ವಾಗ್ದಾಳಿ ನಡೆಸಿದರು. ಸಿನಿಮಾ ಪ್ರಚಾರಕ್ಕೆ ಬರಲು ಒಪ್ಪದ ಅಜೇಯ್ ಜೊತೆಗೆ ಈ ಸಿನಿಮಾ ಮುಗಿದ ಮೇಲೆ ನನಗೂ ಯಾವುದೇ ಸಂಬಂಧವಿರಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ