ದರ್ಶನ್ ಗೆ ಇನ್ನೆಷ್ಟು ದಿನ ಜೈಲು ವಾಸ: ಬಿಡುಗಡೆಗೆ ನಿಗದಿಯಾಯ್ತು ಸಮಯ

Sampriya

ಮಂಗಳವಾರ, 17 ಸೆಪ್ಟಂಬರ್ 2024 (18:46 IST)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧದ 3991 ಪುಟಗಳ ಸುದೀರ್ಘವಾದ ಚಾರ್ಜ್‌ಶೀಟ್ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.

ಆದರೆ ದರ್ಶನ್‌ಗೆ ಯಾವಾಗ ಬಿಡುಗಡೆ ಭಾಗ್ಯ ಸಿಗಬಹುದು ಎಂದು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪ್ರಕರಣ ಸಂಬಂಧ ಎಲ್ಲ ರೀತಿಯ ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ಮುಗಿದಿದೆ. ‌ಆದರೆ ಎ10ಆರೋಪಿ ಮೊಬೈಲ್‌ ಅನ್ನು ಮತ್ತೊಮ್ಮ ಎಫ್‌ಎಸ್‌ಎಲ್‌ ವರದಿಗೆ ಕಳುಹಿಸಲಾಗಿದೆ. ಅದರ ವರದಿ ಬಂದ್ಮೇಲೆ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಬಹುದು.

ಹೀಗಾಗಿ ತನಿಖೆ ಎಲ್ಲ ರೀತಿಯಲ್ಲಿ ಮುಗಿದಿರುವುದರಿಂದ ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರಬರುತ್ತಾರೆಂಬ ಸುದ್ದಿಯಿದೆ.

ಹತ್ಯೆ ಪ್ರಕರಣ ಸಂಬಂಧ ತನಿಖೆಯಾಗಿ ಪೊಲೀಸರು ಈಗಾಗಲೇ ಸಾಕ್ಷ್ಯ ವಶಕ್ಕೆ ಪಡೆದು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಹಿನ್ನೆಲೆ ದರ್ಶನ್ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು.

ನ್ಯಾಯಾಧೀಶರು ಕೂಡಾ ಪ್ರಕರಣ ಎಲ್ಲ ಆಯಾಮಗಳಿಂದ ತನಿಖೆ ಮುಗಿದಿರುವುದರಿಂದ ದರ್ಶನ್ ಅವರನ್ನು ಜೈಲಿನಲ್ಲಿ ಇರಿಸಿಕೊಳ್ಳಲು ಬಲವಾದ ಕಾರಣವನ್ನು ಕೇಳಬಹುದು. ಜಾಮೀನನ್ನು ತೀರಾ ಮುಂದೂಡಲು ಸಾಧ್ಯವಿಲ್ಲದ ಕಾರಣ ದರ್ಶನ್‌ಗೆ ದಸರಾ ವೇಳೆ ದಾಸನಿಗೆ ಬಿಡುಗಡೆ ಭಾಗ್ಯ ಸಿಗುವ ಸಾಧ್ಯತೆಯಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ