ನನ್ನ ಅಕ್ಕನ ಸಾವು ಸಾವಲ್ವಾ? ಎನ್ನುತ್ತಾ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ ಇಂದ್ರಜಿತ್ ಲಂಕೇಶ್

ಗುರುವಾರ, 3 ಸೆಪ್ಟಂಬರ್ 2020 (10:36 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಆರೋಪ ಮಾಡಿರುವ ಇಂದ್ರಜಿತ್ ಲಂಕೇಶ್ ಸಿಸಿಬಿ ಪೊಲೀಸರ ಮುಂದೆ ಇಂದು ವಿಚಾರಣೆಗೆ ಹಾಜರಾಗುವ ಮೊದಲು ಮಾಧ್ಯಮಗಳ ಮುಂದೆ ಮಾತನಾಡುವಾಗ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಡ್ರಗ್ ಜಾಲದ ಬಗ್ಗೆ ನಾನು ಮೊದಲ ಬಾರಿಗೆ ಮಾತನಾಡಿದ ಹಲವರು ನನ್ನ ಅಕ್ಕ ಗೌರಿ ಬಗ್ಗೆ ಹೇಳಿದರು. ಆಕೆಯೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಳು ಎಂದೆಲ್ಲಾ ಆರೋಪ ಮಾಡಿದರು. ಅವರ ಹೆಸರನ್ನು ನಾನು ಇಲ್ಲಿ ಹೇಳಲು ಬಯಸುವುದಿಲ್ಲ.

ಆದರೆ ಅವಳ ಸಾವು ಸಾವಲ್ವಾ? ಅದರ ಬಗ್ಗೆ ತನಿಖೆ ಮಾಡಬಾರದಾ? ನಾನು ತೀರಿಕೊಂಡ ನಟ ಚಿರಂಜೀವಿ ಸರ್ಜಾ ಬಗ್ಗೆ ಮಾತನಾಡಿದ್ದು ತಪ್ಪು. ಅದಕ್ಕೆ ನಾನು ಕ್ಷಮೆ ಯಾಚಿಸಿ, ಹೇಳಿಕೆಯನ್ನೂ ಹಿಂಪಡೆದಿದ್ದೇನೆ. ಆದರೆ ಹಾಗಂತ ನನ್ನ ಅಕ್ಕನ ಸಾವಿನ ಬಗ್ಗೆ ಪ್ರಶ್ನಿಸುವುದು ಸರಿಯಾ ಎನ್ನುತ್ತಾ ಇಂದ್ರಜಿತ್ ಕಣ್ಣೀರು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ