ಚಿರಂಜೀವಿ ಸಿನಿಮಾದಿಂದ ಕಾಜಲ್ ಅಗರ್ವಾಲ್ ಹೊರಕ್ಕೆ? ಕಾರಣವೇನು ಗೊತ್ತಾ?

ಶುಕ್ರವಾರ, 1 ಮೇ 2020 (11:12 IST)
ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅಭಿನಯಸುತ್ತಿರುವ ‘ಆಚಾರ್ಯ’ ಸಿನಿಮಾಗೆ ಕಾಜಲ್ ಅಗರ್ವಾಲ್ ನಾಯಕಿ ಎಂದು ಪಕ್ಕಾ ಆಗಿತ್ತು. ಆದರೆ ಈಗ ಕಾಜಲ್ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

 
ಮೆಗಾಸ್ಟಾರ್ ಗೆ ನಾಯಕಿಯಾಗುವ ಅವಕಾಶ ಕಾಜಲ್ ಗೆ ಬಂದಿದ್ದರೂ ಈಗ ಇದ್ದಕ್ಕಿದ್ದಂತೆ ಚಿತ್ರತಂಡದಿಂದ ಹೊರಬರಲು ಕಾರಣವೇನು ಎಂಬ ಚರ್ಚೆ ಈಗ ಟಾಲಿವುಡ್ ನಲ್ಲಿ ಶುರುವಾಗಿದೆ.

ಮೂಲಗಳ ಪ್ರಕಾರ ಕಾಜಲ್ ತಮಿಳಿನ ಬಿಗ್ ಬಜೆಟ್ ಸಿನಿಮಾವೊಂದಕ್ಕೆ ಡೇಟ್ ಕೊಟ್ಟಿದ್ದರು. ಲಾಕ್ ಡೌನ್ ನಿಂದಾಗಿ ಆಚಾರ್ಯ ಶೂಟಿಂಗ್ ನಿಂತಿದೆ. ಹೀಗಾಗಿ ಈ ಎರಡೂ ಸಿನಿಮಾಗಳಿಗೆ ಡೇಟ್ ಹೊಂದಿಸಲಾಗದೇ ಕಾಜಲ್ ಚಿರಂಜೀವಿ ಸಿನಿಮಾಗೆ ಕೊಕ್ ಕೊಟ್ಟಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ