ಕರ್ನಾಟಕ ಬಂದ್: ಯಾವೆಲ್ಲಾ ಸ್ಟಾರ್ ಗಳು ಪ್ರತಿಭಟನೆಗೆ ಬರ್ತಿದ್ದಾರೆ?

ಗುರುವಾರ, 28 ಸೆಪ್ಟಂಬರ್ 2023 (16:44 IST)
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿರೋಧಿಸಿ ನಾಳೆ ನಡೆಯಲಿರುವ ಕರ್ನಾಟಕ ಬಂದ್ ಗೆ ಚಿತ್ರರಂಗವೂ ಬೆಂಬಲ ನೀಡುತ್ತಿದೆ.

 ಈ ಬಗ್ಗೆ ಸ್ವತಃ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್ ಸುರೇಶ್ ಮಾಹಿತಿ ನೀಡಿದ್ದರು. ಇದೀಗ ಸ್ವತಃ ಸುರೇಶ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿವಾಸಕ್ಕೆ ತೆರಳಿ ಹೋರಾಟದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದಾರೆ.

ಅದರಂತೆ ಶಿವಣ್ಣ ಭಾಗಿಯಾಗಲು ಒಪ್ಪಿಕೊಂಡಿದ್ದಾರಂತೆ. ಉಳಿದಂತೆ ಧ್ರುವ ಸರ್ಜ, ಪ್ರೇಮ್, ಅಜಯ್ ರಾವ್, ಶ್ರೀಮುರಳಿ, ವಿಜಯ್ ರಾಘವೇಂದ್ರ ಸೇರಿದಂತೆ ಅನೇಕ ಕಲಾವಿದರಿಗೆ ಆಹ್ವಾನ ನೀಡಲಾಗಿದೆ. ಇವರೆಲ್ಲಾ ಪ್ರತಿಭಟನೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ