ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು! ರಕ್ಷಿತ್ ಶೆಟ್ಟಿ ಬೆನ್ನುತಟ್ಟಿದ ಕಿಚ್ಚ ಸುದೀಪ್

ಮಂಗಳವಾರ, 17 ಮೇ 2022 (17:04 IST)
ಬೆಂಗಳೂರು: ಚಾರ್ಲಿ 777 ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಕ್ಷಿತ್ ಶೆಟ್ಟಿಗೆ ಕಿಚ್ಚ ಸುದೀಪ್ ಅಭಿನಂದಿಸಿದ್ದಾರೆ.

ನಿನ್ನ ಚಾರ್ಲಿ ಸಿನಿಮಾದ ಟ್ರೈಲರ್ ಬಹುಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಇದಕ್ಕೆ ಎಲ್ಲೆಡೆ ಭಾರೀ ಪ್ರತಿಕ್ರಿಯೆ ಬಂದಿದೆ. ಇದೀಗ ಟ್ರೈಲರ್ ವೀಕ್ಷಿಸಿದ ಕಿಚ್ಚ ಸುದೀಪ್ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

‘ಚಾರ್ಲಿಯ ಪ್ರತೀ ದೃಶ್ಯಗಳೂ ನನಗೆ ಇಷ್ಟವಾಯ್ತು. ಇಂತಹ ಸಿನಿಮಾ ಮಾಡಲು ಸ್ಕ್ರಿಪ್ಟ್ ಗಿಂತ ಹೆಚ್ಚಾಗಿ ಪ್ರಯತ್ನ ಬೇಕು. ಇಂತಹ ಯೋಚನೆಯೇ ಒಂದು ಸಾಹಸ. ನಿಮ್ಮ ಧೈರ್ಯ ಮೆಚ್ಚಲೇಬೇಕು. ನಿಮಗೆ ಒಳ್ಳೆಯದಾಗಲಿ ಗೆಳೆಯ’ ಎಂದು ಸುದೀಪ್ ರಕ್ಷಿತ್ ಬೆನ್ನು ತಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ