ತಮ್ಮದೇ ಪ್ರತಿಮೆ ಅನಾವರಣಗೊಳಿಸಲು ಒಪ್ಪದ ಕಿಚ್ಚ ಸುದೀಪ್

ಬುಧವಾರ, 27 ಏಪ್ರಿಲ್ 2022 (17:29 IST)
ಬೆಂಗಳೂರು: ಮಹರ್ಷಿ ವಾಲ್ಮೀಕಿ ಮತ್ತು ವೀರ ಮದಕರಿ ನಾಯಕರ ಪ್ರತಿಮೆ ಅನಾವರಣ ಮಾಡಲು ಬಂದಾಗ ಕಿಚ್ಚ ಸುದೀಪ್ ಗೆ ರಾಯಚೂರಿನ ಜನ ಅವರದ್ದೇ ಪ್ರತಿಮೆ ಅನಾವರಣಗೊಳಿಸಲು ಕೇಳಿಕೊಂಡಿದ್ದರು.

ಆದರೆ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಲು ಸುದೀಪ್ ನಿರಾಕರಿಸಿದ್ದಾರೆ. ಆದರೆ ಹಾಗಂತ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ.

ತಮ್ಮ ಮೇಲಿನ ಪ್ರೀತಿಗೆ ಮಾತಿನಲ್ಲಿ ಧನ್ಯವಾದ ಸಲ್ಲಿಸಿದ ಸುದೀಪ್ ಪ್ರತಿಮೆ ಅನಾವರಣಗೊಳಿಸಲು ನಾನೇನು ಸಾಧನೆ ಮಾಡಿಲ್ಲ. ಸಾಧನೆ ಮಾಡಬೇಕಾದ್ದು ಸಾಕಷ್ಟಿದೆ ಎಂದು ನಯವಾಗಿ ನಿರಾಕರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ