ದ್ವಾರಕೀಶ್ ಬ್ಯಾನರ್ ನಲ್ಲಿ ಕೆಲಸ ಮಾಡಿದ ದಿನಗಳನ್ನು ಸ್ಮರಿಸಿಕೊಂಡ ಕಿಚ್ಚ ಸುದೀಪ್

ಬುಧವಾರ, 23 ಅಕ್ಟೋಬರ್ 2019 (09:16 IST)
ಬೆಂಗಳೂರು: ದ್ವಾರಕೀಶ್ ಚಿತ್ರ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿರುವ 51 ನೇ ಸಿನಿಮಾ ಆಯುಷ್ಮಾನ್ ಭವ. ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ನವಂಬರ್ 1 ರಿಂದ ಈ ಸಿನಿಮಾ ಬಿಡುಗಡೆಯಾಗುತ್ತಿದೆ.


ಈ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ತಮ್ಮ ನೆಚ್ಚಿನ ದ್ವಾರಕೀಶ್ ಮಾಮ ಮತ್ತು ಸ್ನೇಹಿತ, ನಟ ಶಿವರಾಜ್ ಕುಮಾರ್ ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಜತೆಗೆ ತಾವು ದ್ವಾರಕೀಶ್ ಬ್ಯಾನರ್ ನಡಿಯಲ್ಲಿ ಕೆಲಸ ಮಾಡಿದ ಗಳಿಗೆಯನ್ನು ಸ್ಮರಿಸಿಕೊಂಡಿದ್ದಾರೆ. ವಿಷ್ಣುವರ್ಧನ ಎನ್ನುವ ಸಿನಿಮಾವನ್ನು ದ್ವಾರಕೀಶ್ ಕಿಚ್ಚ ಸುದೀಪ್ ಅಭಿನಯದಲ್ಲಿ ನಿರ್ಮಾಣ ಮಾಡಿದ್ದರು.

ದ್ವಾರಕೀಶ್ ಚಿತ್ರ ಬ್ಯಾನರ್ ನಡಿಯಲ್ಲಿ ಕೆಲಸ ಮಾಡಿದ ಅವಕಾಶ ಮತ್ತು ಗೌರವ ಒಮ್ಮೆ ನನ್ನದಾಗಿತ್ತು. ಈ ಅವಕಾಶಕ್ಕೆ ದ್ವಾರಕೀಶ್ ಮಾಮನಿಗೆ ಧನ್ಯವಾದ ಹೇಳುತ್ತೇನೆ ಹಾಗೂ ಶಿವಣ್ಣನಿಗೆ ಮತ್ತು ಇಡೀ ಆಯುಷ್ಮಾನ್ ಭವ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಕಿಚ್ಚ ಸುದೀಪ್ ಶುಭಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ