ಅನಾರೋಗ್ಯ ಪೀಡಿತ ಅಭಿಮಾನಿಯ ಬೇಡಿಕೆಗೆ ಕರಗಿದ ಕಿಚ್ಚ ಸುದೀಪ್

ಮಂಗಳವಾರ, 11 ಡಿಸೆಂಬರ್ 2018 (10:08 IST)
ಬೆಂಗಳೂರು: ಅದೆಷ್ಟೋ ಅಭಿಮಾನಿಗಳು ಜೀವನದ ತಮ್ಮ ಕೊನೆಯ ಆಸೆ ತಮ್ಮ ಮೆಚ್ಚಿನ ತಾರೆಯರನ್ನು ನೋಡುವ ಹಂಬಲ ಎನ್ನುವುದು, ಅದನ್ನು ಆ ಸೆಲೆಬ್ರಿಟಿ ನೆರವೇರಿಸುವ ಸುದ್ದಿಗಳನ್ನು ಸಾಕಷ್ಟು ಓದಿದ್ದೇವೆ.

ಇದೀಗ ಕಿಚ್ಚ ಸುದೀಪ್ ಮತ್ತೆ ಅಂತಹದ್ದೇ ಕೆಲಸ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಯಾಗಿರುವ ರಾಹುಲ್ ಎನ್ನುವ 12 ವರ್ಷದ ಬಾಲಕ ಬ್ರೈನ್ ಹೆಮರೇಜ್ ನಂತಹ ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದು ಈತ ಜೀವನದಲ್ಲಿ ಒಂದೇ ಒಂದು ಬಾರಿ ಕಿಚ್ಚನನ್ನು ಭೇಟಿಯಾಗುವ ಹಂಬಲ ಹೊಂದಿದ್ದ.

ಇದನ್ನು ಎನ್ ಜಿಒ ಒಂದು ಕಿಚ್ಚ ಸುದೀಪ್ ಗೆ ಟ್ವೀಟ್ ಮುಖಾಂತರ ತಿಳಿಸಿತ್ತು. ಮೊದಲು ಈತನ ಬಗ್ಗೆ ಡೀಟೈಲ್ ಪಡೆದುಕೊಂಡ ಕಿಚ್ಚ ಇದೀಗ ತಾವು ಸದ್ಯಕ್ಕೆ ಬೆಂಗಳೂರಿನಲ್ಲಿಲ್ಲ. ಬೆಂಗಳೂರಿಗೆ ಬಂದ ತಕ್ಷಣ ಶುಕ್ರವಾರ ರಾಹುಲ್ ನನ್ನು ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ನನ್ನ ಪ್ರಾರ್ಥನೆ, ಹಾರೈಕೆ ಯಾವತ್ತೂ ಆತನ ಜತೆಗಿರುತ್ತದೆ ಎಂದಿದ್ದಾರೆ. ಅಭಿಮಾನಿಯ ಕಷ್ಟಕ್ಕೆ ಮರುಗಿದ ಕಿಚ್ಚನಿಗೆ ಅಭಿಮಾನಿಗಳು ಅಭಿನಂದಿಸಿದ್ದಾರೆ.






















ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ