ಕುರುಕ್ಷೇತ್ರದಿಂದ ಹಿರಿಯ ನಟಿ ಲಕ್ಷ್ಮೀ ಹೊರಬಂದಿದ್ದೇಕೆ?

ಬುಧವಾರ, 20 ಸೆಪ್ಟಂಬರ್ 2017 (11:24 IST)
ಬೆಂಗಳೂರು: ಹಿರಿಯ ನಟಿ ಲಕ್ಷ್ಮೀ ಕುರುಕ್ಷೇತ್ರ ಸಿನಿಮಾದಲ್ಲಿ ಕುಂತಿ ಪಾತ್ರ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಲಕ್ಷ್ಮೀ ಆ ಚಿತ್ರದಿಂದ ಹೊರ ಬಂದಿದ್ದಾರೆ. ಅವರ ಜಾಗಕ್ಕೆ ಇನ್ನೊಬ್ಬ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಬಂದಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

 
ಇದಕ್ಕೆ ಕಾರಣ ಲಕ್ಷ್ಮಿ ಜೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಕುರುಕ್ಷೇತ್ರ ಶೂಟಿಂಗ್ ಗೆ ಸಮಯ ಕೊಡಲಾಗುತ್ತಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಲಕ್ಷ್ಮೀ ಬದಲಿಗೆ ಚಿತ್ರತಂಡ ಹಿರಿಯ ನಟಿ ಭಾರತಿ ವಿಷ್ಣುವರ್ಧನ್  ಅವರನ್ನು ಸಂಪರ್ಕಿಸಿದೆ ಎನ್ನಲಾಗಿದೆ.

ಕುರುಕ್ಷೇತ್ರ ಸಿನಿಮಾ ಶೂಟಿಂಗ್ ನಡೆಯುತ್ತಿರುವುದು ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ.ಹೀಗಾಗಿ ಎರಡೂ ಕಡೆ ಡೇಟ್ ಹೊಂದಿಸುವುದು ಲಕ್ಷ್ಮೀಗೆ ಕಷ್ಟವಾದ ಕಾರಣ ಕುಂತಿ ಪಾತ್ರದಲ್ಲಿ ನಟಿಸುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ…  ಹುಡಗನೊಂದಿಗೆ ಮಾತನಾಡಿದ ತಪ್ಪಿಗೆ ಮಗಳನ್ನೇ ಕೊಂದು ಹಾಕಿದ ಅಪ್ಪ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ