ಧಾರವಾಹಿ ಚಿತ್ರೀಕರಣ ವೇಳೆ ನಟ ಮಂಡ್ಯ ರಮೇಶ್ ಗೆ ಅವಘಡ

ಗುರುವಾರ, 30 ನವೆಂಬರ್ 2023 (08:50 IST)
Photo Courtesy: Twitter
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಪೋಷಕ ನಟ ಮಂಡ್ಯ ರಮೇಶ್ ಗೆ ಧಾರವಾಹಿಯೊಂದರ ಚಿತ್ರೀಕರಣ ವೇಳೆ ಅವಘಡ ಸಂಭವಿಸಿ ಕಾಲಿಗೆ ಗಾಯವಾಗಿದೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಅಸೆ’ ಧಾರವಾಹಿಯ ಚಿತ್ರೀಕರಣದಲ್ಲಿ ಮಂಡ್ಯ ರಮೇಶ್ ಪಾಲ್ಗೊಂಡಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಅವರ ಕಾಲು ಮತ್ತು ಕೈಗೆ ಏಟಾಗಿದೆ.

ತಕ್ಷಣವೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಂದೆಯ ಆರೋಗ್ಯದ ಮಾಹಿತಿ ನೀಡಿರುವ ಪುತ್ರಿ ಕಾಲಿಗೆ ಏಟಾಗಿದೆ. ಸದ್ಯಕ್ಕೆ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಕೆಲವು ದಿನಗಳವರೆಗೆ ಮಂಡ್ಯ ರಮೇಶ್ ವಿಶ್ರಾಂತಿ ಮಾಡಬೇಕಾಗಬಹುದು. ‘ಆಸೆ’ ಧಾರವಾಹಿ ನಟ ರಮೇಶ್ ಅರವಿಂದ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಧಾರವಾಹಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ