ಅಪ್ಪನ ಆಣೆಗೂ ಈ ಶೋ ಹಾಳ್ ಮಾಡಕ್ಕೆ ಯಾರಿಂದನೂ ಸಾಧ್ಯವಿಲ್ಲ: ಜಗದೀಶ್‌ಗೆ ಕಿಚ್ಚ ಖಡಕ್ ವಾರ್ನಿಂಗ್

Sampriya

ಶನಿವಾರ, 5 ಅಕ್ಟೋಬರ್ 2024 (18:22 IST)
Photo Courtesy X
ಬೆಂಗಳೂರು: ವಾರದ ಆರಂಭದಿಂದಲೇ ಒಂದಲ್ಲ ಒಂದು ಕಿರಿಕ್ ಮಾಡುತ್ತಿದ್ದ ಲಾಯರ್ ಜಗದೀಶ್‌ಗೆ ಕಿಚ್ಚಾ ಸುದೀಪ್ ಇಂದು ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಇಂದು ಬಿಡುಗಡೆ ಮಾಡಿದ ವಾರದ ಕತೆ ಕಿಚ್ಚನ ಜತೆ ಪ್ರೋಮೋದಲ್ಲಿ ಜಗದೀಶ್‌ಗೆ ಕಿಚ್ಚ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಪ್ರೋಮೋದಲ್ಲಿ ಸುದೀಪ್ ಅವರು ಜಗದೀಶ್ ಬಳಿ ಶೋವನ್ನು ಯಾವ ರೀತಿ ನಡೆಸಿಕೊಡಬೇಕೆಂದು ಕೇಳಿದ್ದಾರೆ. ಅದಕ್ಕೆ ಜಗದೀಶ್ ನಿಮ್ಮದೇನು ತಪ್ಪಿಲ್ಲ ಎಂದು ಹೇಳಿದ್ದಾರೆ.

ಖಂಡಿತವಾಗಿಯೂ ಶೋ ಕರೆಕ್ಟ್‌ ಆಗಿದೆ, ಇಲ್ಲದಿದ್ದರೆ ನನ್ ಮಗನ್ ಹನ್ನೊಂದನೇ ಸೀಸನ್ ದಾಡುತ್ತಲೇ ಇರಲಿಲ್ಲ. ತಾವು ಕ್ಯಾಮಾರ ಮುಂದೆ  ಬಿಗ್‌ಬಾಸ್‌ಗೆ ಚಾಲೆಂಜ್ ಮಾಡಿದ್ದು, ತಪ್ಪೇ ಅಲ್ಲ. ಯಾಕೆಂದರೆ ಅದು ಕಾಮಿಡಿಯಾಗಿತ್ತು. ಈ ಶೋವನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆ ಒಳಗಿರುವ ನಿಮ್ಮ ಕೈಯಲ್ಲಿದೆ. ಆದರೆ ಹಾಳ್ ಮಾಡಕ್ಕೆ ನಿಮ್ಮ ಅಪ್ಪನಾ ಆಣೆಗೂ ಸಾಧ್ಯವಿಲ್ಲ ಎಂದು ಜಗದೀಶ್‌ಗೆ ಡೈರೆಕ್ಟೆ ಆಗಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಕಿಚ್ಚನ ಲುಕ್‌ಗೆ ಮನೆ ಮಂದಿಯೆಲ್ಲ ಶಾಕ್ ಆಗಿದ್ದಾರೆ.

ಜಗದೀಶ್‌ ಕಿರಿಕ್‌ ಸುದೀಪ್ ತೆಗೆದುಕೊಂಡ ಕ್ಲಾಸ್‌ ನೋಡಿ ಮನೆಮಂದಿಯೆಲ್ಲ ಶಾಕ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ