ಪಾಪ ಕಳೆಯೋ ಗೋ ಮಾತೆಗೆ ಹಣ್ಣು ಕೊಟ್ಟ ಪವಿತ್ರಾ ಗೌಡ ವಿಡಿಯೋ: ಕಾಮೆಂಟ್ಸ್ ನೋಡಿ
ಗೋ ಮಾತೆಗೆ ಬಾಳೆಹಣ್ಣು ನೀರು ನೀಡಿ ನಮಸ್ಕರಿಸಿದ್ದಾರೆ. ಈ ಮೂಲಕ ಹಬ್ಬದ ಶುಭಾಶಯ ಕೋರಿದ್ದಾರೆ. ಜೀವನದಲ್ಲಿ ಏನೇ ಪಾಪ ಕರ್ಮಗಳನ್ನು ಮಾಡಿದ್ದರೂ ಗೋ ಮಾತೆಗೆ ಆಹಾರ ಒದಗಿಸುವುದರಿಂದ ಆಕೆ ಪಾಪ ಕಳೆಯುತ್ತಾಳೆ ಎನ್ನುವ ನಂಬಿಕೆಯಿದೆ. ಗೋ ಮಾತೆಯಲ್ಲಿ ಕೋಟ್ಯಾಂತರ ದೇವರುಗಳು ವಾಸಿಸುತ್ತಾರೆ ಎಂಬುದು ನಂಬಿಕೆ.
ಇದೀಗ ಪವಿತ್ರಾ ಗೌಡ ಗೋ ಮಾತೆಯ ಪೂಜೆ ಮಾಡಿದ್ದಕ್ಕೆ ನೆಟ್ಟಿಗರು ಕೆಲವರು ಟ್ರೋಲ್ ಮಾಡಿದ್ದರೆ ಮತ್ತೆ ಕೆಲವರು ಶುಭಾಶಯ ಕೋರಿದ್ದಾರೆ. ಕೆಲವರು ಪಾಪ ಮಾಡದ ತಪ್ಪಿಗೆ ಜೈಲಿಗೆ ಹೋಗಿ ಬಂದ್ರು ಇನ್ನಾದ್ರೂ ದೇವರು ಒಳ್ಳೆದು ಮಾಡಲಿ ಎಂದು ಅನುಕಂಪ ತೋರಿದ್ದಾರೆ. ಮತ್ತೆ ಕೆಲವರು ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ ಎಂದಿದ್ದಾರೆ.