ಅಪ್ಪು ಹೆಸರಿನಲ್ಲಿ ಮಾಲೆ ಹಾಕುವುದು ಸರಿಯೇ? ನಟ ಪ್ರಥಮ್ ವಿರೋಧ

ಶುಕ್ರವಾರ, 24 ಫೆಬ್ರವರಿ 2023 (11:04 IST)
Photo Courtesy: Twitter
ಬೆಂಗಳೂರು: ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಶಬರಿಮಲೈ ಅಯ್ಯಪ್ಪ ಸ್ವಾಮಿಯ ವ್ರತದಂತೇ ಅಪ್ಪು ಮಾಲೆ ಹಾಕುವ ಕಾರ್ಯಕ್ರಮಕ್ಕೆ ಕರೆ ನೀಡಿದ್ದರು.

ಅಪ್ಪು ಅಗಲಿದ ಮೇಲೆ ಅಭಿಮಾನಿಗಳು ಅವರನ್ನು ದೇವರಾಗಿಸಿದ್ದಾರೆ. ಹೀಗಾಗಿ ಅಪ್ಪು ಹೆಸರಿನಲ್ಲಿ ಮಾಲೆ ವ್ರತ ಕೈಗೊಳ್ಳಲು ತೀರ್ಮಾನಿಸಿದ್ದರು.

ಆದರೆ ಇದರ ಬಗ್ಗೆ ನಟ, ನಿರ್ದೇಶಕ ಪ್ರಥಮ್ ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿಗೆ ಕೆಲವು ನೆಟ್ಟಿಗರೂ ಸಹಮತ ವ್ಯಕ್ತಪಡಿಸಿದ್ದಾರೆ. ‘ದೇವರ ಮೇಲೆ ಭಕ್ತಿ ಇರಲಿ, ಕಲಾವಿದರ ಮೇಲೆ ಪ್ರೀತಿ, ಅಭಿಮಾನವಿರಲಿ. ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ. ಬಹಳ ಶಿಸ್ತುಗಳನ್ನು ಪಾಲಿಸಿ ಮಾಲೆ ಧಾರಣೆ ಮಾಡಬೇಕು. ಕಲಾವಿದರನ್ನು ಕಲಾವಿದರಾಗೋಕೆ ಬಿಡಿ. ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತಿರೇಕದ ವರ್ತನೆ ತೋರಬಾರದು. ದೇವರು ದೇವರೇ. ಕಲಾವಿದರು ಕಲಾವಿದರೇ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ