ಪುನೀತ ಪರ್ವ ನೋಡುತ್ತಿದ್ದ ಅಪ್ಪು ಅಭಿಮಾನಿ ಸಾವು

ಶನಿವಾರ, 22 ಅಕ್ಟೋಬರ್ 2022 (16:58 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿ ಸಿನಿಮಾ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮವನ್ನು ನಿನ್ನೆ ಲಕ್ಷಾಂತರ ಅಭಿಮಾನಿಗಳು ಪ್ರತ್ಯಕ್ಷವಾಗಿ ಮತ್ತು ಟಿವಿ ಮೂಲಕ ವೀಕ್ಷಿಸಿದ್ದಾರೆ.

ಇದೇ ರೀತಿ ಅಪ್ಪು ಅಭಿಮಾನಿಯೊಬ್ಬರು ಪುನೀತ ಪರ್ವ ವೀಕ್ಷಣೆ ಮಾಡುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿ ಅಪ್ಪು ಅಭಿಮಾನಿಯೊಬ್ಬರು ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿದ್ದು ಸಾವನ್ನಪ್ಪಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ