ಗಂಧದ ಗುಡಿ ಕಾರ್ಯಕ್ರಮಕ್ಕೆ ರಿಷಬ್, ಜಗ್ಗೇಶ್ ಗೈರಾಗಿದ್ದು ಯಾಕೆ? ಕಾರಣ ಇಲ್ಲಿದೆ

ಶನಿವಾರ, 22 ಅಕ್ಟೋಬರ್ 2022 (09:30 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಪರಭಾಷಾ ಕಲಾವಿದರೂ ಬಂದಿದ್ದರು.

ಆದರೆ ಇತ್ತೀಚೆಗಷ್ಟೇ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, ಪುನೀತ್ ತುಂಬಾ ಇಷ್ಪಪಡುತ್ತಿದ್ದ ನವರಸನಾಯಕ ಜಗ್ಗೇಶ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದಕ್ಕೆ ಕಾರಣವನ್ನೂ ಇಬ್ಬರೂ ಸ್ಟಾರ್ ಗಳು ಹೇಳಿದ್ದಾರೆ.

ನವರಸನಾಯಕ ಜಗ್ಗೇಶ್ ಈಗ ಅಮೆರಿಕಾ ಪ್ರವಾಸದಲ್ಲಿದ್ದಾರೆ. ವಾಪಸ್ ಬರಲು ತಕ್ಷಣಕ್ಕೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ನನ್ನ ಪ್ರೀತಿಯ ಅಪ್ಪು ಕೊನೆಯ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಕೂಡಾ ತಾವು ಗೈರಾಗಿದ್ದರ ಕಾರಣ  ವಿವರಿಸಿದ್ದಾರೆ. ‘ಪೂರ್ವ ನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಬಹರೈನ್ ನಲ್ಲಿರುವ ಕಾರಣ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮ ಲೈವ್ ನೋಡ್ತಾ ಕಣ್ತುಂಬಿ ಬಂದವು. ನಾವೂ ಅಲ್ಲಿ ಆ ನೆನಪುಗಳ ನಡುವೆ ಇರಬೇಕಿತ್ತು ಎನಿಸಿತು. ಅಪ್ಪು ಸರ್ ಕ್ಷಮೆಯಿರಲಿ. ಮೊದಲ ದಿನವೇ ಗಂಧದ ಗುಡಿಯಲ್ಲಿ ಭೇಟಿಯಾಗೋಣ’ ಎಂದು ರಿಷಬ್ ಕ್ಷಮೆ ಯಾಚಿಸಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ