ಡ್ರೈವರ್ ಮಾಡಿದ ತಪ್ಪಿಗೆ ಕಾರ್ಮಿಕನ ಮನೆಗೆ ಕರೆಸಿ ಕ್ಷಮೆ ಕೇಳಿದ ರಚಿತಾ ರಾಂ

ಮಂಗಳವಾರ, 15 ಆಗಸ್ಟ್ 2023 (16:23 IST)
ಬೆಂಗಳೂರು: ನಟಿ ರಚಿತಾ ರಾಂ ಸ್ವಾತಂತ್ರ್ಯೋವ ದಿನವವನ್ನು ಇಂದು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ತಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.

ನಿನ್ನೆ ಲಾಲ್ ಭಾಗ್ ಫಲ, ಪುಷ್ಪ ಪ್ರದರ್ಶನಕ್ಕೆ ರಚಿತಾ ರಾಂ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಲಾಲ್ ಭಾಗ್ ನಲ್ಲಿ ಅವರ ಕಾರು ಡ್ರೈವರ್ ತಪ್ಪಿನಿಂದ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿತ್ತು. ಆಗ ರಚಿತಾ ಗಮನಕ್ಕೆ ಇದು ಬಂದಿರಲಿಲ್ಲ. ಆದರೆ ಈ ವಿಚಾರ ಮಾಧ‍್ಯಮಗಳಲ್ಲಿ ಸುದ್ದಿಯಾಗಿತ್ತು. ರಚಿತಾ ಕಾರ್ಮಿಕನ ಕಡೆ ತಿರುಗಿಯೂ ನೋಡದೇ ಹೋಗಿದ್ದಾರೆ ಎನ್ನಲಾಗಿತ್ತು.

ಆದರೆ ಇಂದು ತಮ್ಮ ತಪ್ಪನ್ನು ರಚಿತಾ ತಾವೇ ತಿದ್ದಿಕೊಂಡಿದ್ದಾರೆ. ತಮ್ಮ ಡ್ರೈವರ್ ನ ಅಚಾತುರ್ಯದಿಂದ ನಡೆದ ತಪ್ಪಿಗೆ ನಿನ್ನೆ ಢಿಕ್ಕಿ ಹೊಡೆದಿದ್ದ ಕಾರ್ಮಿಕ ರಂಗಪ್ಪನನ್ನು ಮನೆಗೆ ಕರೆಸಿ ಪಕ್ಕದಲ್ಲೇ ಕೂರಿಸಿಕೊಂಡು ನಿನ್ನೆ ನಡೆದ ಘಟನೆಗೆ ಮನಸಾರೆ ಕ್ಷಮೆ ಯಾಚಿಸಿ ಸ್ವಾತಂತ್ರ್ಯ ದಿನಕ್ಕೆ ಶುಭ ಹಾರೈಸಿದ್ದಾರೆ. ರಚಿತಾ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ