ಟೀಕೆ ಮಾಡಿದವರಿಗೆ ಸವಾಲು ಹಾಕಿ ಗೆದ್ದ ರಕ್ಷಿತ್ ಶೆಟ್ಟಿ

ಸೋಮವಾರ, 12 ಜುಲೈ 2021 (09:00 IST)
ಬೆಂಗಳೂರು: ಕೆಲವು ದಿನಗಳ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿಡಿದೆದ್ದಿದ್ದರು.


ತಮ್ಮನ್ನು ಟೀಕೆ ಮಾಡಿದವರಿಗೆ ಜುಲೈ 11 ರಂದು ತಕ್ಕ ಉತ್ತರ ಕೊಡುವುದಾಗಿ ರಕ್ಷಿತ್ ಹೇಳಿಕೊಂಡಿದ್ದರು. ಅದರಂತೇ ನಡೆದುಕೊಂಡಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುವ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ರಕ್ಷಿತ್ ‘ರಿಚರ್ಡ್ ಆಂಟನಿ’ ಎಂಬ ಸಿನಿಮಾಗೆ ನಾಯಕ ಮತ್ತು ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಬಗ್ಗೆ ನಿನ್ನೆ ಘೋಷಣೆಯಾಗಿದೆ.

ಇದರ ಟೈಟಲ್ ನೋಡಿದ ಅಭಿಮಾನಿಗಳಿಗೆ ಇದು ‘ಉಳಿದವರು ಕಂಡಂತೆ’ ಸಿನಿಮಾದ ಮುಂದುವರಿದ ಭಾಗ ಎಂಬುದು ಪಕ್ಕಾ ಆಗಿದೆ. ರಕ್ಷಿತ್ ಎಲ್ಲಿ ಆರಂಭ ಮಾಡಿದ್ದೆನೋ ಮತ್ತೆ ಅಲ್ಲಿಂದಲೇ ಶುರು ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಟೈಟಲ್ ನಲ್ಲಿ ಕಡಲ ತಡಿಯಲ್ಲಿ ರಕ್ತ ಸಿಕ್ತ ಹೆಜ್ಜೆ ಗುರುತಿನ ಚಿತ್ರಗಳಿದ್ದು, ಜೊತೆಗೆ ಉಳಿದವರು ಕಂಡಂತೆ ಮೊದಲು ಮತ್ತು ನಂತರ ಎಂದು ಬರೆಯಲಾಗಿದೆ.  ಅಂತೂ ಸಲಾರ್, ಕೆಜಿಎಫ್ 2 ಮುಂತಾದ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಮತ್ತೊಂದು ಅದ್ಧೂರಿ ಸಿನಿಮಾಗೆ ಕೈ ಹಾಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ