ಅಂಬರೀಷ್ ಸಾವಿಗೆ ಸಂತಾಪ ಸೂಚಿಸಿದ ನಟಿ ರಮ್ಯಾ ವಿರುದ್ಧ ಟ್ವಿಟರಿಗರು ಆಕ್ರೋಶಗೊಂಡಿದ್ದೇಕೆ?!

ಭಾನುವಾರ, 25 ನವೆಂಬರ್ 2018 (09:37 IST)
ಬೆಂಗಳೂರು: ಹಿರಿಯ ನಟ, ರಾಜಕಾರಣಿ ಅಂಬರೀಷ್ ಸಾವಿನ ಬಗ್ಗೆ ನಟಿ ರಮ್ಯಾ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಆದರೆ ಟ್ವೀಟ್ ಮಾಡಿದ ರಮ್ಯಾಗೆ ಟ್ವಿಟರಿಗರು ಟಾಂಗ್ ಕೊಟ್ಟಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ?

‘ಅಂಬರೀಷ್ ಅಂಕಲ್ ಸಾವಿನ ಸುದ್ದಿ ಕೇಳಿ ನಿಜಕ್ಕೂ ಬೇಸರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಅವರನ್ನು ನಾವು ಯಾವತ್ತೂ ಸ್ಮರಿಸಿಕೊಳ್ಳುತ್ತೇವೆ’ ಎಂದು ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರಿಗರು ಯಾಕೆ ನಿನಗೆ ಕನ್ನಡ ಬರಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನು ಕೆಲವರು ಬದುಕಿದ್ದಾಗ ಅವರನ್ನು ಗೌರವಿಸಲಿಲ್ಲ. ಈಗ ಸತ್ತ ಮೇಲೆ ಈ ನಾಟಕ ಯಾಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಅವರಿಂದಾಗಿಯೇ ನೀನು ಸಂಸದೆ ಆದೆ ಎನ್ನುವುದನ್ನು ಮರೆಯಬೇಡ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ