ಶ್ರೀಮನ್ನಾರಾಯಣನ ಅವತಾರ ತಾಳಿದ ಆರ್ ಸಿಬಿ ಆಟಗಾರರು!

ಸೋಮವಾರ, 26 ಅಕ್ಟೋಬರ್ 2020 (11:19 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಈಗ ಶ್ರೀಮನ್ನಾರಾಯಣನ ಅವತಾರ ತಾಳಿದ್ದಾರೆ! ಕೊಹ್ಲಿ ಆಂಡ್ ಟೀಂನ ಅವನೇ ಶ್ರೀಮನ್ನಾರಾಯಣ ಸಿನಿಮಾ ಶೈಲಿಯ ಪೋಸ್ಟರ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.


ಕಾಂತಿ ಸ್ಟುಡಿಯೋ ಕ್ರಿಯೇಟಿವ್ ಆಗಿ ಅವನೇ ಶ್ರೀಮನ್ನಾರಾಯಣ ಪೋಸ್ಟರ್ ಮಾದರಿಯಲ್ಲಿ ಆರ್ ಸಿಬಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಇದನ್ನು ಸ್ವತಃ ರಕ್ಷಿತ್ ಶೆಟ್ಟಿ ಮೆಚ್ಚಿಕೊಂಡಿರುವುದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಜಾಗದಲ್ಲಿ ವಿರಾಟ್ ಕೊಹ್ಲಿ ಇದ್ದರೆ, ಕೆಳಗೆ ಉಳಿದೆಲ್ಲಾ ಆಟಗಾರರ ಭಾವಚಿತ್ರಗಳೂ ಇವೆ. ಅಂತೂ ಆರ್ ಸಿಬಿ ಹುಡುಗರಿಗೆ ನಾರಾಯಣನ ಟಚ್ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ