ಎಐಎಡಿಎಂಕೆ ಮಾಜಿ ಸಚಿವ ಮಣಿಕಂದನ್ ಮೇಲೆ ಮೋಸದ ಆರೋಪ ಮಾಡಿದ ನಟಿ ಶಾಂತಿನಿ

ಶನಿವಾರ, 29 ಮೇ 2021 (11:10 IST)
ಚೆನ್ನೈ : ನಾಡೋಡಿಗಲ್ ತಮಿಳು ಆ್ಯಕ್ಷನ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ ನಟಿ ಶಾಂತಿನಿ ಅವರು ಎಐಎಡಿಎಂಕೆ ಮಾಜಿ ಸಚಿವ ಮಣಿಕಂದನ್ ಅವರು ಮದುವೆಯಾಗುವ ನೆಪದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಟಿ ಶಾಂತಿನಿ ಮತ್ತು ಮಾಜಿ ಸಚಿವ ಮಣಿಕಂದನ್ ಅವರು ವ್ಯವಹಾರದ ವಿಚಾರಕ್ಕೆ ಮೊದಲು ಭೇಟಿಯಾಗಿ ಅವರ ನಡುವೆ ಸ್ನೇಹ ಬೆಳೆದಿದೆ. ಬಳಿಕ ಅವರು ಮದುವೆಯಾಗಲು ನಿರ್ಧರಿಸಿ ಒಟ್ಟಿಗೆ ವಾಸಿಸಲು ಶುರುಮಾಡಿದ್ದಾರಂತೆ. ಬಳಿಕ ನಟಿ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿದ್ದಲ್ಲದೇ ಮದುವೆಯನ್ನು ನಿರಾಕರಿಸಿದ್ದಾರಂತೆ.

ಹಾಗೂ ಈ ವಿಚಾರ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರಂತೆ. ಇದೀಗ ನಟ ತಮ್ಮ ಖಾಸಗಿ ಪೋಟೊಗಳನ್ನು ಸೋರಿಕೆ ಮಾಡಿ ವಿಚಾರ ಬಹಿರಂಗಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ