ನಟಿ ಕಂಗನಾ ರಣಾವತ್ ನಡೆಗೆ ಬೆದರಿದ ಶಿವಸೇನೆ ನಾಯಕ ಯೂ ಟರ್ನ್

ಗುರುವಾರ, 10 ಸೆಪ್ಟಂಬರ್ 2020 (18:14 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಬೋಲ್ಡ್ ಹೇಳಿಕೆಗಳಿಂದ ಮಹಾರಾಷ್ಟ್ರ ಸರಕಾರ ಪೇಚಿಗೆ ಸಿಲುಕುತ್ತಿದೆ.

ನಟಿ ಕಂಗನಾ ವಿರುದ್ಧ ಅವಾಚ್ಯವಾಗಿ ಮಾತನಾಡಿದ್ದ ಶಿವಸೇನೆ ನಾಯಕ ಸಂಜಯ ರಾವತ್ ಇದೀಗ ತಮ್ಮ ಹೇಳಿಕೆ ಬದಲಿಸುತ್ತಿದ್ದಾರೆ.

ಕಂಗನಾ ರಣಾವತ್ ಕಚೇರಿ ನೆಲಸಮ ಮಾಡಿದ್ದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದಿರುವ ಅವರು, ನಟಿಗೆ ಶಿವಸೇನೆಯ ಯಾವುದೇ ಕಾರ್ಯಕರ್ತ ಜೀವ ಬೆದರಿಕೆ ಹಾಕಿಲ್ಲ ಎಂದು ಯೂ ಟರ್ನ್ ಹೊಡೆದಿದ್ದಾರೆ.

ಮುಂಬೈನಲ್ಲಿ ದೇಶದ ಎಲ್ಲಾ ಭಾಗಗಳಿಂದ ಬಂದ ಜನರು ಇದ್ದಾರೆ. ಅದರಂತೆ ನಟಿ ಕಂಗನಾ ಇದ್ದಾರೆ ಎಂದು ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ