ಪುನೀತ್ ಬಳಿಕ ಅಣ್ಣ ಶಿವರಾಜ್ ಕುಮಾರ್ ರಿಂದ ಸಿನಿ ಕಾರ್ಮಿಕರಿಗೆ ನೆರವು

ಬುಧವಾರ, 23 ಜೂನ್ 2021 (09:11 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾದ ಸಿನಿ ಕಾರ್ಮಿಕರಿಗೆ ನೆರವಾಗಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ.ಗಳ ಧನ ಸಹಾಯ ಮಾಡಿದ್ದರು.


ಇದೀಗ ಪುನೀತ್ ಹಾದಿಯಲ್ಲೇ ಅಣ್ಣ ಶಿವರಾಜ್ ಕುಮಾರ್ ಕೂಡಾ ಸಾಗಿದ್ದಾರೆ. ಶಿವಣ್ಣ ಕೂಡಾ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ.ಗಳ ಧನ ಸಹಾಯ ಮಾಡಿದ್ದಾರೆ.

ಈ ಹಣ ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡ ಸಿನಿಮಾ ಕಾರ್ಮಿಕರಿಗೆ ಹಣಕಾಸಿನ ನೆರವು ನೀಡಲು ಬಳಕೆಯಾಗಲಿದೆ. ಪತ್ನಿ ಗೀತಾ ಹುಟ್ಟುಹಬ್ಬದ ಬೆನ್ನಲ್ಲೇ ಶಿವಣ್ಣ ಕಾರ್ಮಿಕರಿಗೆ ಈ ಉಡುಗೊರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ