ಕೊಡಗು ಅಭಿಯಾನಕ್ಕೆ ಶಿವರಾಜ್ ಕುಮಾರ್, ಪುನೀತ್ ಬೆಂಬಲ

ಸೋಮವಾರ, 17 ಜೂನ್ 2019 (09:08 IST)
ಬೆಂಗಳೂರು: ಕೊಡಗು ಮತ್ತು ಉತ್ತರ ಕರ್ನಾಟಕದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂಬ ಸೋಷಿಯಲ್ ಮೀಡಿಯಾ ಅಭಿಯಾನಕ್ಕೆ ಸ್ಯಾಂಡಲ್ ವುಡ್ ತಾರೆಯರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಧ್ವನಿಗೂಡಿಸಿದ್ದಾರೆ.

 

ಕೊಡಗು ಬಳಿಕ ಇದೀಗ ಉತ್ತರ ಕರ್ನಾಟಕದಲ್ಲೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಕೂಗು ಕೇಳಿಬಂದಿದೆ. ಅದಕ್ಕೀಗ ಸುದೀಪ್, ಪುನೀತ್, ಶಿವರಾಜ್ ಕುಮಾರ್ ಸೇರಿದಂತೆ ಸ್ಟಾರ್ ನಟರು ಕೈ ಜೋಡಿಸಿದ್ದಾರೆ.

ತಮ್ಮ ತಮ್ಮ ಸಾಮಾಜಿಕ ಜಾಲತಾಣ ಪೇಜ್ ಗಳ ಮೂಲಕ ರಾಜ್ಯದ ಎಲ್ಲಾ ಕಡೆ ಸುಸಜ್ಜಿತ ಆಸ್ಪತ್ರೆ ಸೇರಿದಂತೆ ಮೂಲ ಸೌಕರ್ಯ ಸುಲಭವಾಗಿ ಜನರಿಗೆ ದೊರಕುವಂತಾಗಬೇಕು ಎಂದು ಈ ಸ್ಟಾರ್ ನಟರು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ