ಒಬ್ಬ ಹೆಣ್ಣಾಗಿ ನನಗೆ ಇದನ್ನು ಸಹಿಸಲಾಗ್ತಿಲ್ಲ: ಸುಮಲತಾ ಬೇಸರ

ಶನಿವಾರ, 5 ಡಿಸೆಂಬರ್ 2020 (10:02 IST)
ಬೆಂಗಳೂರು: ಮಂಡ್ಯದಲ್ಲಿ ಕಬ್ಬಿನ ಕಟಾವಿಗೆ ಬಂದಿದ್ದ ಅಪ್ರಾಪ್ತೆಯ ಸಾವಿನ ಪ್ರಕರಣ ಕುರಿತಂತೆ ನಟಿ, ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.


ಘಟನೆಯನ್ನು ಖಂಡಿಸಿರುವ ಸುಮಲತಾ ‘ಒಬ್ಬ ಹೆಣ್ಣಾಗಿ ಹಾಗೂ ಒಬ್ಬ ತಾಯಿಯಾಗಿ ಹರುಗಲವಾಡಿಯ ಪ್ರಕರಣ ಅಮಾನವೀಯ ಕೃತ್ಯ.  ನನಗೆ ಸಹಿಸಲಾಗದ ನೋವು ತಂದಿದೆ. ಆ ಮಗಳ ಪೋಷಕರಿಗೆ ಸಾಂತ್ವನ ಹಾಗೂ ಪರಿಹಾರ ಕೇವಲ ಒಂದು ಔಪಚಾರಿಕ ಕೆಲಸವಾಗಬಾರದು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಏನುಕ್ರಮ ಕೈಗೊಳ್ಳಬಹುದು ಎಂದು ಸಂಬಂಧಪಟ್ಟ ಅಧಿಕಾರಿಗಳ ಜತೆ  ಚರ್ಚಿಸುತ್ತೇನೆ ಎಂದಿದ್ದಾರೆ. ಘಟನೆ ಕುರಿತಂತೆ ಸೆಲಬ್ರೆಟಿಗಳು, ಜನಸಾಮಾನ್ಯರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ