ತಮಿಳಿನ ಖ್ಯಾತ ನಿರ್ದೇಶಕ ಕೆವಿ ಆನಂದ್ ಹೃದಯಾಘಾತದಿಂದ ನಿಧನ

ಶುಕ್ರವಾರ, 30 ಏಪ್ರಿಲ್ 2021 (11:41 IST)
ಚೆನ್ನೈ : ತಮಿಳಿನ ಖ್ಯಾತ ನಿರ್ದೇಶಕ ಕೆವಿ ಆನಂದ್ ಅವರು ಹೃದಯಾಘಾತದಿಂದ ಶುಕ್ರವಾರ ಚೆನ್ನೈ ನಲ್ಲಿ ನಿಧನರಾಗಿದ್ದಾರೆ.

ಇವರಿಗೆ 54 ವರ್ಷ ವಯಸ್ಸಾಗಿದ್ದು, ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ಬಳಲುತ್ತಿದ್ದರು, ಮುಂಜಾನೆ 3 ಗಂಟೆಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯು ಚೆನ್ನೈನ ಬೆಸೆಂಟ್ ನಗರ ಶವಾಗಾರದಲ್ಲಿ ನಡೆಯಲಿದೆ ಎನ್ನಲಾಗಿದೆ. ಕಾಲಿವುಡ್ ನ ಗಣ್ಯರು ಅಂತಿಮ ನಮನ ಸಲ್ಲಿಸುದ್ದಾರೆ.

ಇವರು ಸಿನಿಮಾಟೋಗ್ರಾಫರ್ , ನಿರ್ದೇಶಕ ಮತ್ತು ಫೋಟೋ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು 1990ರ ಆರಂಭದಲ್ಲಿ ಬಾಲಿವುಡ್ ಸೇರಿದಂತೆ ಅನೇಕ ಕಡೆ 15 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ