ತಮಿಳು ನಟ ವಿಜಯ್ ಅಭಿಮಾನಿಗಳಿಂದ ಕನ್ನಡಿಗರ ಮೇಲೆ ಹಲ್ಲೆ

ಗುರುವಾರ, 19 ಅಕ್ಟೋಬರ್ 2017 (09:05 IST)
ಬೆಂಗಳೂರು: ತಮಿಳು ನಟ ವಿಜಯ್ ಅವರ ಅಭಿಮಾನಿಗಳು ಬೆಂಗಳೂರಿನ ಸಂಪಿಗೆ ಚಿತ್ರಮಂದಿರದ ಬಳಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದರಿಂದ ನಿನ್ನೆಯಿಡೀ ರದ್ದಾಂತವಾಗಿದೆ.

 
ಇದರಿಂದಾಗಿ ಚಿತ್ರ ಪ್ರದರ್ಶನವೇ ರದ್ದಾಗಿದೆ. ಸಂಪಿಗೆ ಥಿಯೇಟರ್ ಬಳಿ ವಿಜಯ್ ಕಟೌಟ್ ಹಾಕಿದ ಅವರ ಅಭಿಮಾನಿಗಳು ನೋಡಿ ನಮ್ಮ ಬಾಸ್ ನ ಕಟೌಟ್ ಎಂದು ಹಲ್ಲೆ ನಡೆಸಿದ್ದು, ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದರಿಂದ ಕೆರಳಿದ ಕನ್ನಡಿಗರು, ಥಿಯೇಟರ್ ಮುಂದೆ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಬೆಂಗಳೂರಿನ ಹಲವು ಥಿಯೇಟರ್ ಗಳ ಮುಂದೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಅಲ್ಲದೆ, ಚಿತ್ರ ಪ್ರದರ್ಶನವೂ ರದ್ದಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ