ವಿಷ್ಣುವರ್ಧನ್ ಅವಹೇಳನ ಮಾಡಿದ ವಿಜಯ ರಂಗರಾಜುವಿಗೆ ಇನ್ನೂ ಮುಗಿದಿಲ್ಲ ಕಂಟಕ

ಸೋಮವಾರ, 14 ಡಿಸೆಂಬರ್ 2020 (10:05 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವಹೇಳನ ಮಾಡಿದ ತೆಲುಗು ಖಳನಟ ವಿಜಯ ರಂಗರಾಜು ಮಂಡಿಯೂರಿ ಕ್ಷಮೆ ಯಾಚಿಸಿದರೂ ಕಂಟಕ ಮುಗಿದಿಲ್ಲ.


ಈ ಪ್ರಕರಣ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಲುಗು ಮತ್ತು ದಕ್ಷಿಣ ಭಾರತ ಸಿನಿಮಾ ಸಂಘಕ್ಕೆ ದೂರು ನೀಡಿದೆ. ಈ ದೂರಿನನ್ವಯ ತೆಲುಗು ಕಲಾವಿದರ ಸಂಘದಲ್ಲಿ ಸಭೆ ಕರೆದು ಅಲ್ಲಿಗೆ ವಿಜಯ ರಂಗರಾಜು ಅವರನ್ನು ಕರೆಸಿ ಶೋಕಾಸ್ ನೋಟಿಸ್ ನೀಡಿ ಬಹಿರಂಗ ಕ್ಷಮಾಪಣಾ ಪತ್ರ ನೀಡಲು ತಾಕೀತು ಮಾಡುವ ಸಾಧ‍್ಯತೆಯಿದೆ. ಸದ್ಯಕ್ಕೆ ವಿಜಯ ರಂಗರಾಜು ಕೊರೋನಾದಿಂದ ಬಳಲುತ್ತಿದ್ದು, ಇದಾದ ಬಳಿಕ ತೆಲುಗು ಸಿನಿಮಾ ಸಂಘ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ