ಆಚಾರ್ಯ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರಂತೆ ಈ ನಟ

ಶನಿವಾರ, 20 ಫೆಬ್ರವರಿ 2021 (12:46 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದ ಬಿಡಿಗಡೆಯ ದಿನಾಂಕ ನಿಗದಿಯಾಗಿದ್ದು, ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಈ ಚಿತ್ರದಲ್ಲಿ ಬಂಗಾಳಿ ನಟರೊಬ್ಬರು ಚಿರಂಜೀವಿ ಅವರ ಜೊತೆ ಕಾದಾಡಲಿದ್ದಾರೆ ಎನ್ನಲಾಗಿದೆ.

ಹೌದು. ಆಚಾರ್ಯ ಚಿತ್ರದಲ್ಲಿ ಬಂಗಾಳಿ ನಟ ಜಿಸ್ಶು ಸೇನಾ ಗುಪ್ತಾ ಅವರು ಖಳನಾಯಕನಾಗಿ ನಟಿಸಲಿದ್ದಾರಂತೆ. ಈಗಾಗಲೇ ಈ ಚಿತ್ರದಲ್ಲಿ ನಸೋನಿ ಸೂದ್ ಹಾಗೂ ರಾಮ್‍ ಚರಣ್ ನಟಿಸುತ್ತಿದ್ದು, ನೆಗೆಟಿವ್ ಪಾತ್ರಕ್ಕಾಗಿ ನಿರ್ದೇಶಕ ಕೊರಟಾಲ ಶಿವ ಹುಡುಕಾಟ ನಡೆಸುತ್ತಿದ್ದರು. ಇದೀಗ ಬಂಗಾಳಿ ನಟ ಜಿಸ್ಶು ಸೇನಾ ಗುಪ್ತಾ ಅವರನ್ನು ಆಯ್ಕೆ ಮಾಡಲಾಗಿದ್ದು, ಇದಕ್ಕೆ ಅವರು ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ