ಕುರುಕ್ಷೇತ್ರ ಚಿತ್ರಕ್ಕೂ ತಟ್ಟಿದೆ ಚುನಾವಣೆ ನೀತಿ ಸಂಹಿತೆಯ ಬಿಸಿ

ಶುಕ್ರವಾರ, 27 ಏಪ್ರಿಲ್ 2018 (06:31 IST)
ಬೆಂಗಳೂರು : ಚುನಾವಣೆ ನೀತಿ ಸಂಹಿತೆಯ ಬಿಸಿ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರಕ್ಕೂ ತಟ್ಟಿದೆ. ಆದಕಾರಣ ಚಿತ್ರದ ಆಡಿಯೋ ರಿಲೀಸ್ ನ್ನು ಚುನಾವಣೆ ನಂತರ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.


ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಇದೇ ತಿಂಗಳ 28 ರಂದು ನಡೆಯಬೇಕಾಗಿತ್ತು. ಆದರೆ ಕುರುಕ್ಷೇತ್ರ ಸಿನಿಮಾ ಭಾರಿ ಬಜೆಟ್ ಸಿನಿಮಾ ಆದ್ದರಿಂದ ಚಿತ್ರತಂಡ ಆಡಿಯೋ ಬಿಡುಗಡೆ ಸಮಾರಂಭವನ್ನೂ ಅದ್ಧೂರಿಯಾಗಿ ಜನರ ಮಧ್ಯದಲ್ಲಿ ಮಾಡಬೇಕು ಎಂದು ನಿರ್ಮಾಪಕ ಮುನಿರತ್ನ ಅವರು ನಿರ್ಧರಿಸಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣೆ ಮುಗಿಸಿಕೊಂಡು ಅದ್ದೂರಿ ಆಗಿ ಆಡಿಯೋ ಬಿಡುಗಡೆ ಸಮಾರಂಭ ಮಾಡಲು ನಿರ್ಧಾರ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ