ಗಣೇಶನನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಚಂದನವನದ ತಾರೆಯರು

Sampriya

ಭಾನುವಾರ, 8 ಸೆಪ್ಟಂಬರ್ 2024 (11:39 IST)
Photo Courtesy X
ಬೆಂಗಳೂರು: ದೇಶದಾದ್ಯಂತ ಗಣೇಶ ಚತುರ್ಥಿ 2024ರ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.  ಇನ್ನೂ ಚಂದನವನದ ತಾರೆಯರು ಕೂಡಾ ತಮ್ಮ ಮನೆಯಲ್ಲಿ ವಿಘ್ನ ವಿನಾಶಕನನ್ನು ಅದ್ಧೂರಿಯಾಗಿ ಆರಾಧಿಸಿದರು.

ಎಂದಿನಂತೆ ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಹಬ್ಬದ ಸಡಗರ ಜೋರಾಗಿತ್ತು. ಕುಟುಂಬ ಸಮೇತ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಘ್ನ ವಿನಾಶಕನನ್ನು ಆರಾಧಿಸಿದರು.

ಇನ್ನೂ ಕಾಂತಾರ ಖ್ಯಾತಿಯ ರಿಷಭ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್, ರಕ್ಷಿತಾ ಪ್ರೇಮ್, ರಾಧಿಕಾ ಕುಮಾರಸ್ವಾಮಿ, ನಮ್ರತಾ ಗೌಡ, ನಿರೂಪಕ ನಿರಂಜನ್ ದೇಶಪಾಂಡೆ, ಅಕುಲಾ ಬಾಲಾಜಿ ಸೇರಿದಂತೆ ಮುಂತಾದವರು ಹಬ್ಬವನ್ನು ಆಚರಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಾಜ್ಯದಾದ್ಯಂತ ಗೌರಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಹಬ್ಬದೂಟವನ್ನು ಮಾಡಿ ಸಂಭ್ರಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ