ಸರಿಗಮಪ ಶೋಗೆ ರಾಜೇಶ್ ಕೃಷ್ಣನ್ ಸ್ಥಾನಕ್ಕೆ ಬರುವ ತೀರ್ಪುಗಾರ ಇವರೇ!

ಮಂಗಳವಾರ, 7 ಸೆಪ್ಟಂಬರ್ 2021 (11:06 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಹಾಡಿನ ರಿಯಾಲಿಟಿ ಶೋ ಅತ್ಯಂತ ಜನಪ್ರಿಯವಾದ ಶೋ ಆಗಿದ್ದು, ಈ ಶೋ ಮತ್ತೆ ಆರಂಭಗೊಳ್ಳುತ್ತಿದೆ.


ಈ ಬಗ್ಗೆ ವಾಹಿನಿ ಈಗಾಗಲೇ ಪ್ರಕಟಣೆ ನೀಡಿದೆ. ಆದರೆ ಇಷ್ಟು ದಿನ ತೀರ್ಪುಗಾರರಲ್ಲೊಬ್ಬರಾಗಿದ್ದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಈಗ ಕಲರ್ಸ್ ವಾಹಿನಿಯ ಎಸ್ ಪಿಬಿ ಸ್ಮರಣಾರ್ಥ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ತೀರ್ಪುಗಾರರಾಗಿದ್ದಾರೆ.

ಹೀಗಾಗಿ ಅವರು ಈ ಬಾರಿಯ ಸರಿಗಮಪ ಶೋನಲ್ಲಿ ತೀರ್ಪುಗಾರರಾಗಿ ಇರುವುದಿಲ್ಲ. ಅವರ ಸ್ಥಾನದಲ್ಲಿ ಯಾರು ತೀರ್ಪುಗಾರರಿರಬಹುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಜೇಶ್ ಸ್ಥಾನದಲ್ಲಿ ಕನ್ನಡದ ಮತ್ತೊಬ್ಬ ಪ್ರತಿಭೆ ಹೇಮಂತ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ ಎಂದಿನಂತೆ ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್ ಕೂಡಾ ತೀರ್ಪುಗಾರರಾಗಿರಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ