ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯನಿಂದ ಏರ್‌ಲೈನ್ಸ್ ಸಿಬ್ಬಂದಿಗೆ ಅವಾಜ್

ಸೋಮವಾರ, 2 ಅಕ್ಟೋಬರ್ 2017 (17:37 IST)
ರಾಯ್ಪುರ್ ವಿಮಾನ ನಿಲ್ದಾಣದಲ್ಲಿ ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಆವಾಜ್ ಹಾಕಿದ ಘಟನೆ ವರದಿಯಾಗಿದೆ.
ಆದಿತ್ಯ ನಾರಾಯಣ್, ಮಿತಿಗಿಂತ ಮೀರಿ ಹೆಚ್ಚಿನ ಲಗೇಜ್‌ಗಳನ್ನು ತೆಗೆದುಕೊಂಡು ಹೋಗುವುದನ್ನು ಆಕ್ಷೇಪಿಸಿದ ವಿಮಾನ ನಿಲ್ದಾಣ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದಗಳನ್ನು ನಿಂದಿಸಿದ್ದಾನೆ.
 
ನನ್ನ ವಿಮಾನ ಪ್ರಯಾಣವನ್ನು ರದ್ದುಗೊಳಿಸಿದರೂ ಪರವಾಗಿಲ್ಲ. ಹೇಗಾದ್ರೂ ಮಾಡಿ ಮುಂಬೈಗೆ ತೆರಳುತ್ತೇನೆ. ಮುಂಬೈಗೆ ತೆರಳಿದ ನಂತರ ನಿನ್ನ ಚಡ್ಡಿ ಕಳೆಯದಿದ್ದರೇ ನನ್ನ ಹೆಸರನ್ನು ಬದಲಿಸಿಬಿಡು ಎಂದು ಆದಿತ್ಯ ವಾಗ್ದಾಳಿ ನಡೆಸಿದ್ದಾನೆ.
 
ವಿಮಾನ ಪ್ರಯಾಣಿಕನ ಲಗೇಜ್ 17 ಕೆಜಿ ಮಾತ್ರ ನಿಗದಿಪಡಿಸಲಾಗಿದೆ. ಆದರೆ ಆದಿತ್ಯ ಬಳಿ 40 ಕೆಜಿಗೂ ಅಧಿಕ ಲಗೇಜ್‌ ಇರುವುದರಿಂದ ವಿಮಾನ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ