ಕಾರ್ಮಿಕರ ಸಂಘಕ್ಕೆ ನಟ ಉಪೇಂದ್ರ ದೇಣಿಗೆ

ಮಂಗಳವಾರ, 14 ಏಪ್ರಿಲ್ 2020 (09:47 IST)
ಬೆಂಗಳೂರು: ಕರ್ನಾಟಕ ಚಲನಚಿತ್ರ ಕಾರ್ಮಿಕ ಸಂಘಟನೆಗಳ 18 ಸಂಘಗಳಿಗೆ ರಿಯಲ್ ಸ್ಟಾರ್ ಉಪೇಂದ್ರ ತಲಾ 25 ಸಾವಿರ ರೂ.ಗಳಂತೆ 4,50,000 ರೂ. ದೇಣಿಗೆ ನೀಡಿದ್ದಾರೆ.


ಲಾಕ್ ಡೌನ್ ಹಿನ್ನಲೆಯಲ್ಲಿ ಕಾರ್ಮಿಕರ ಬದುಕು ದುಸ್ತರವಾಗಿದೆ. ನಿತ್ಯದ ಊಟಕ್ಕೆ ಪರದಾಡುವಂತಾಗಿದೆ. ಹೀಗಾಗಿ ಕಾರ್ಮಿಕರ ನೆರವಿಗೆ ಉಪೇಂದ್ರ ದೇಣಿಗೆ ನೀಡಿದ್ದಾರೆ.

ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿರುವ ಉಪೇಂದ್ರ ಕೊರೋನಾದಿಂದ ಮುಕ್ತರಾಗೋಣ, ಸಮಾಜಕ್ಕೆ ನಮ್ಮಿಂದಾದಷ್ಟು ಸಹಾಯ ಮಾಡೋಣ ಎಂದು ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ