ಈ ಚಿತ್ರದ ಮೂಲಕ ನಾಯಕನಾಗಿ ಮತ್ತೆ ಚಿತ್ರರಂಗಕ್ಕೆ ಮರುಪ್ರವೇಶ ಮಾಡಲಿರುವ ನಟ ವಡಿವೇಲು

ಮಂಗಳವಾರ, 30 ಮಾರ್ಚ್ 2021 (16:56 IST)
ಚೆನ್ನೈ : ಕಳೆದ ಹಲವು ತಿಂಗಳುಗಳಿಂದ ತಮಿಳು ಚಿತ್ರರಂಗದಲ್ಲಿ ನಟ  ವಾಡಿವೇಲು ಅವರ ಮರು ಪ್ರವೇಶದ ಬಗ್ಗೆ ಹಲವು ಊಹಾಪೋಹಗಳು ಕೇಳಿಬಂದಿವೆ. ಆದರೆ ಈ ವಿಚಾರ ಈಗ ನಿಜ ಎನ್ನಲಾಗಿದೆ.

‘ಎಮ್ಮನ್ ಮಗನ್ ‘ ಖ್ಯಾತಿಯ ತಿರುಮುಗುವಾನ್ ನಿರ್ದೇಶಿಸಲಿರುವ ಹೊಸ ಚಿತ್ರದಲ್ಲಿ ನಟ ವಡಿವೇಲು ಅವರು ನಾಯಕನಾಗಿ ನಟಿಸಲಿದ್ದಾರಂತೆ.  ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಿಸಲಿದ್ದಾರೆ.

ಹಾಗೇ ಈಗಾಗಲೇ ವಡಿವೇಲು ಅವರು ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದು, ಇದನ್ನು ಸೂರಜ್ ಅವರು ನಿರ್ದೇಶನ ಮಾಡಲಿದ್ದು, ಇದಕ್ಕೆ ‘ನಾಯ್ ಶೇಖರ್’ ಎಂದು ಹೆಸರಿಡಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ