ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

Krishnaveni K

ಶುಕ್ರವಾರ, 27 ಜೂನ್ 2025 (12:06 IST)
ಬೆಂಗಳೂರು: ನಟಿ ವೈಷ್ಣವಿ ಗೌಡ ಪತಿ ಅನುಕೂಲ್ ಮಿಶ್ರಾ ಜೊತೆ ಹನಿಮೂನ್ ಮೂಡ್ ನಲ್ಲಿದ್ದಾರೆ. ಮನಾಲಿಯ ಸುಂದರ ಪರಿಸರದಲ್ಲಿ ಪತಿ ಜೊತೆ ಏಕಾಂತದ ಕ್ಷಣ ಕಳೆಯುತ್ತಿರುವ ವೈಷ್ಣವಿ ಫೋಟೋ ಹಂಚಿಕೊಂಡಿದ್ದು ಕತ್ತಲ್ಲಿ ತಾಳಿ ಇಲ್ಲ ಎಂದು ಟ್ರೋಲ್ ಆಗಿದ್ದಾರೆ.

ವೈಷ್ಣವಿ ಹಾಗೂ ಅನುಕೂಲ್ ಮಿಶ್ರಾ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮನಾಲಿಯ ಕೂಲ್ ಜಾಗದಲ್ಲಿ ದಂಪತಿ ಹನಿಮೂನ್ ನಲ್ಲಿದ್ದಾರೆ. ಈ ನಡುವೆ ವೈಷ್ಣವಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹನಿಮೂನ್ ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮನಾಲಿಯ ಸ್ಥಳೀಯ ಉಡುಗೆ ತೊಟ್ಟ ಫೋಟೋ ಜೊತೆಗೆ ಕೆಲವು ಮಾಡ್ ಡ್ರೆಸ್ ನಲ್ಲಿರುವ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಆದರೆ ಇದನ್ನು ನೋಡಿ ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಈ ಫೋಟೋದಲ್ಲಿ ವೈಷ್ಣವಿ ಕತ್ತಿನಲ್ಲಿ ತಾಳಿ ಸರ ಇಲ್ಲ. ಇದೇ ಕಾರಣಕ್ಕೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಮದುವೆಯಾಗಿ ಇಷ್ಟು ಬೇಗ ತಾಳಿ ಕಿತ್ತು ಹಾಕಿದ್ರಾ ಎಂದಿದ್ದಾರೆ.

ಇನ್ನು ಕೆಲವು ಸಂಪ್ರದಾಯವಾದಿಗಳು ಇದು ಆಷಾಢ ಮಾಸ. ಈಗ ಹನಿಮೂನ್ ಮಾಡ್ತಿದ್ದೀರಾ ಎಂದು ಕಾಲೆಳೆದಿದ್ದಾರೆ. ಆಷಾಢ ಮಾಸದಲ್ಲಿ ನವದಂಪತಿಗಳು ಒಟ್ಟಿಗೇ ಇರಬಾರದು ಎಂದು ಸಂಪ್ರದಾಯವಿದೆ. ಅದನ್ನೇ ಇಟ್ಟುಕೊಂಡು ವೈಷ್ಣವಿಯನ್ನು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ