ಬಾಹುಬಲಿ ಸಿನಿಮಾ ಪ್ರದರ್ಶನಕ್ಕೆ ತಡೆ ಒಡ್ಡಿದ ವಾಟಾಳ್ ನಾಗರಾಜ್

ಶನಿವಾರ, 8 ಏಪ್ರಿಲ್ 2017 (14:31 IST)
ಬೆಂಗಳೂರು: ಬಾಹುಬಲಿ ಭಾಗ 1 ರಿ ರಿಲೀಸ್ ಆಗಿದ್ದರೂ, ಕರ್ನಾಟಕದಲ್ಲಿ ಬಿಡುಗಡೆಗೆ ಕನ್ನಡ ಪರ ಹೋರಾಟಗಾರರು ತಡೆ ಒಡ್ಡಿದ್ದಾರೆ.

 

ಕಾವೇರಿ ವಿವಾದ ವಿಚಾರದಲ್ಲಿ ಬಾಹುಬಲಿ ಚಿತ್ರದ ಪ್ರಮುಖ ಪಾತ್ರಧಾರಿ ಕಟ್ಟಪ್ಪ ಸತ್ಯರಾಜ್ ಕನ್ನಡಿಗರನ್ನು ಅವಹೇಳನ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡಿದ್ದ ಕನ್ನಡ ಪರ ಸಂಘಟನೆಗಳು ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲವೆಂದು ಹೇಳಿದ್ದರು.

 
ಅದರಂತೆ ಕನ್ನಡ ಪರ ಹೋಟಾರಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ತೆಲುಗು ಚಿತ್ರದ ಪ್ರಸಾರಕ್ಕೆ ತಡೆ ಒಡ್ಡಿದರು. ಮಲ್ಟಿಪ್ಲೆ್ಸ್ ಚಿತ್ರಮಂದಿರಗಳಲ್ಲಿ ಬಾಹುಬಲಿ ಚಿತ್ರ ಪ್ರಸಾರವಾಗುತ್ತಿತ್ತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ