ವಿಕ್ರಾಂತ್ ರೋಣ ಜೊತೆಗೆ ಮತ್ತೊಂದು ಕನ್ನಡ ಸಿನಿಮಾ ಇಂದಿನಿಂದ ಒಟಿಟಿಯಲ್ಲಿ ಪ್ರಸಾರ

ಶುಕ್ರವಾರ, 2 ಸೆಪ್ಟಂಬರ್ 2022 (08:20 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಇಂದಿನಿಂದ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ.

ಜೀ5  ಆಪ್ ನಲ್ಲಿ ವಿಕ್ರಾಂತ್ ರೋಣ ಎಲ್ಲಾ ಭಾಷೆಗಳಲ್ಲಿ ಇಂದಿನಿಂದ ಪ್ರಸಾರ ಕಾಣಲಿದೆ. ಇದರ ಜೊತೆಗೆ ಮತ್ತೊಂದು ಕನ್ನಡ ಸಿನಿಮಾವೂ ಇಂದೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ನಟ ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋ ನಿರ್ಮಿಸಿದ್ದ ಅಚ್ಯುತ್ ಕುಮಾರ್, ಸಿರಿ, ಕೃಷ್ಣ ಹೆಬ್ಬಾಳೆ ಸೇರಿದಂತೆ ಪ್ರತಿಭಾವಂತ ಕಲಾವಿದರು ನಟಿಸಿದ್ದ ‘ಸಕುಟುಂಬ ಸಮೇತ’ ಸಿನಿಮಾ ಇಂದಿನಿಂದ ವೂಟ್ ಆಪ್ ನಲ್ಲಿ ಪ್ರಸಾರ ಕಾಣಲಿದೆ. ಇದಕ್ಕೂ ಮೊದಲು ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ