ಶಕ್ತಿಧಾಮಕ್ಕೆ ಭೇಟಿ ಕೊಟ್ಟ ತಮಿಳು ನಟ ವಿಶಾಲ್

ಶನಿವಾರ, 10 ಸೆಪ್ಟಂಬರ್ 2022 (16:13 IST)
ಮೈಸೂರು: ಡಾ.ರಾಜ್ ಕುಟುಂಬ ನಡೆಸಿಕೊಂಡು ಬರುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ ತಮಿಳು ನಟ ವಿಶಾಲ್ ಭೇಟಿ ನೀಡಿದ್ದಾರೆ.

ಪುನೀತ್ ರಾಜ್ ಕುಮಾರ್ ನಿಧನರಾದಾಗ ಅವರು ಶಕ್ತಿಧಾಮದಲ್ಲಿರುವ ಬಡ ಹೆಣ್ಣುಮಕ್ಕಳಿಗೆ ಸಹಾಯ ಜೊತೆಗೆ ಇನ್ನೂ ಅನೇಕ ಸಮಾಜಸೇವೆ ಎಲ್ಲರಿಗೂ ಗೊತ್ತಾಗಿತ್ತು. ಪುನೀತ್ ನಮನ ಕಾರ್ಯಕ್ರಮದಲ್ಲಿ ಶಕ್ತಿಧಾಮಕ್ಕೆ ನಾನು ಮನೆ ಕಟ್ಟಲು ಎತ್ತಿಟ್ಟಿರುವ ಹಣ ನೀಡಿ ಸಹಾಯ ಮಾಡುತ್ತೇನೆ, ಅದಕ್ಕೆ ದೊಡ್ಮನೆ ಕುಟುಂಬ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು.

ಪುನೀತ್ ನಿಧನದ ಬಳಿಕ ಶಿವರಾಜ್ ಕುಮಾರ್-ಗೀತಾ ದಂಪತಿ ಶಕ್ತಿಧಾಮದ ಸಂಪೂರ್ಣ ಹೊಣೆ ಹೊತ್ತುಕೊಂಡಿದ್ದಾರೆ. ಇದೀಗ ಅದೇ ಶಕ್ತಿಧಾಮಕ್ಕೆ ಭೇಟಿ ನೀಡಿರುವ ವಿಶಾಲ್, ಇಲ್ಲಿನ ಮಕ್ಕಳನ್ನು ಮಾತನಾಡಿಸಿ ಎಲ್ಲರ ಜೊತೆ ಹಾಡಿ, ಕುಣಿದು ಖುಷಿಪಟ್ಟಿದ್ದಾರೆ. ಮುಂದೆ ತಾನೂ ಶಕ್ತಿಧಾಮದ ಸ್ವಯಂ ಸೇವಕನಾಗಿರಲು ಬಯಸುತ್ತೇನೆ ಎಂದು ವಿಶಾಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ