ಮತ್ತೆ ಕನ್ನಡಕ್ಕೆ ಬರುತ್ತಾರಾ ಅಮಿತಾಭ್ ಬಚ್ಚನ್?!

ಶುಕ್ರವಾರ, 30 ಜೂನ್ 2017 (08:50 IST)
ಬೆಂಗಳೂರು: ನಾಗತಿಹಳ್ಳಿ ಮೇಷ್ಟ್ರು ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಹೊಸಬರನ್ನೆಲ್ಲಾ ಬಿಟ್ಟು ಹಳೆಯ ಹುಲಿ ಶಿವರಾಜ್ ಕುಮಾರ್ ಜತೆಗೆ ಸಿನಿಮಾ ಮಾಡಲು ಹೊರಟಿದ್ದಾರೆ.

 
ಆದರೆ ಈ ಚಿತ್ರದಲ್ಲಿ ಬಾಲಿವುಡ್ ನ ಬಿಗ್ ನಟರೊಬ್ಬರು ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆ ಬಿಗ್ ನಟ ಅಮಿತಾಭ್ ಬಚ್ಚನ್ ಆಗಿರಬಹುದಾ ಎಂಬ ಅನುಮಾನ ಗಾಂಧಿ ನಗರದಲ್ಲಿ ಹುಟ್ಟಿಕೊಂಡಿದೆ.

ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಅಮೃತಧಾರೆ ಸಿನಿಮಾದಲ್ಲಿ ಒಂದು ದೃಶ್ಯಕ್ಕಾಗಿ ಅಮಿತಾಭ್ ಬಚ್ಚನ್ ರನ್ನು ತೋರಿಸಿದ್ದರು. ಇದೀಗ ಮತ್ತೆ ಅವರನ್ನೇ ಕರೆತರಬಹುದೆಂಬ ಊಹಾಪೋಹ ಹಬ್ಬಿದೆ. ಜಾಹೀರಾತೊಂದರ ಚಿತ್ರೀಕರಣದಲ್ಲಿ ಶಿವಣ್ಣ ಮತ್ತು ಅಮಿತಾಭ್ ಒಟ್ಟಿಗೆ ನಟಿಸಿರುವುದರಿಂದ ಆ ಆತ್ಮೀಯತೆಯಿಂದಾದರೂ ಬಿಗ್ ಬಿ ಕನ್ನಡಕ್ಕೆ ಬರಬಹುದೆಂಬ ಲೆಕ್ಕಾಚಾರ ಗಾಸಿಪ್ ಮಂದಿಯದು.

ಇದೆಲ್ಲಾ ಎಷ್ಟು ನಿಜವಾಗುತ್ತದೆಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಅಂತೂ ಇದು, ಇಷ್ಟಕಾಮ್ಯ ಚಿತ್ರದ ನಂತರ ಮೇಷ್ಟ್ರು ಕೈಗೆತ್ತಿಕೊಂಡಿರುವ ಮೊದಲ ಪ್ರಾಜೆಕ್ಟ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ