ನೂರಾರು ‘ಕೈ’ ಕಾರ್ಯಕರ್ತರು BJP ಸೇರ್ಪಡೆ

ಶುಕ್ರವಾರ, 5 ಮೇ 2023 (15:20 IST)
ಚುನಾವಣೆ ಸಮೀಪಿಸಿದ್ರೂ ಸಹ ಟಿಕೆಟ್​ ವಂಚಿತ ಅಭ್ಯರ್ಥಿಗಳ ಭಿನ್ನಮತ ಶಮನವಾಗಿಲ್ಲ. ನಾಮಪತ್ರ ಹಿಂಪಡೆದ ತರುವಾಯ ಭಿನ್ನಮತ ಭಾಗಶಃ ಕಡಿಮೆಯಾಗಿತ್ತು.. ಆದರೆ ಇದೀಗ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ..
ಕಾಂಗ್ರೆಸ್‌ ಕಾರ್ಯಕರ್ತರು ರಾತ್ರೋ ರಾತ್ರಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.. 150ಕ್ಕೂ ಹೆಚ್ಚು ಕಾಂಗ್ರೆಸ್​​ ಕಾರ್ಯಕರ್ತರು BJPಗೆ ಸೇರ್ಪಡೆಗೊಂಡಿದ್ದಾರೆ.. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​​ ಅಭ್ಯರ್ಥಿ ರಾಜೀವ್‌ಗೌಡ ವಿರುದ್ಧ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ.. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ಕಾರ್ಯಕರ್ತರು ಕೇಸರಿ ಪಡೆ ಸೇರ್ಪಡೆಯಾದ್ರು. ಹೊರಗಡೆಯಿಂದ ಬಂದವರಿಗೆ ಮಾನ್ಯತೆ ಕೊಡಲ್ಲ ಎಂದು ಕಾಂಗ್ರೆಸ್​​ ಕಾರ್ಯಕರ್ತರು ಮುನಿಸಿಕೊಂಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ